ಜೂನ್ 26 ರಂದು ಹಗರಿಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕರ ಮುಂದೆ ಸ್ವಪಕ್ಷದ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ವಿರುದ್ಧ ಆಕ್ರೋಶ ಹೊರಹಾಕಿದ್ದ ಭೀಮಾ ನಾಯ್ಕ್, ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯಕ್ಕೆ ರಾಜವಾಳ ಬಳಿ ಇಂಟೇಕ್ ಚಾನೆಲ್ ನಿರ್ಮಿಸಲು ಸಚಿವರು ಅಡ್ಡಪಡಿಸುತ್ತಿದ್ದಾರೆ. ಕಮಿಷನ್ ಆಸೆಗೆ ಏನು ಬೇಕಾದರೂ ಮಾಡಲು ಸಿದ್ಧರಿರುವ ಪರಮೇಶ್ವರ್ ನಾಯ್ಕ್, ಒಬ್ಬ ನಾಲಾಯಕ್ ಸಚಿವ ಎಂದು ತಮ್ಮದೇ ಪಕ್ಷದ ಸಚಿವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು.