ಸಾಮಾನ್ಯ ವರ್ಗದ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ನಾಯಕನನ್ನು ಕಣಕ್ಕಿಳಿಸುವ ಪಾಟೀಲ್ ಕಾರ್ಯತಂತ್ರವು ಯಶಸ್ವಿಯಾಗಿತ್ತು.ನಾಯಕ್ 3,399 ಮತಗಳ ಅಂತರದಿಂದ ಜಯಗಳಿಸಿದರು.ಪಾಟೀಲ್ ಅವರು ಈ ಹುದ್ದೆಯಿಂದ ನಿರ್ಗಮಿಸಿದ ನಂತರ 1991 ರಲ್ಲಿ ಎಸ್ ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರಿಗೆ ಮತ್ತೊಂದು ಹಂತ ಮೇಲಕ್ಕೇರಲು ಅವಕಾಶ ಒದಗಿತ್ತು. ಆ ಸಮಯದಲ್ಲಿ ನಾಯಕ್ ಅವರನ್ನು ದತ್ತಿ ಸಚಿವರನ್ನಾಗಿಸಲಾಗಿತ್ತು.