"ರಾಜೀನಾಮೆ ಸ್ವೀಕರಿಸಲು ಸ್ಪೀಕರ್ ಗೆ ಕೇವಲ ಎಅರಡು ಷರತ್ತುಗಳಿದೆ.ಯಾರದೇ, ಯಾವ ಬಗೆಯದೇ ಒತ್ತಡಗಳಿಲ್ಲದೆ ಸ್ವಯಂಪ್ರೇರಿತ ನಿರ್ಧಾರವಾಗಿರಬೇಕು. ಒಮ್ಮೆ ಸ್ಪೀಕರ್ ಗೆ ಅದು ಮನವರಿಕೆಯಾದರೆ ಅವರು ರಾಜೀನಾಮೆ ಸ್ವೀಕರಿಸಲು ಬದ್ಧರಾಗಲಿದ್ದಾರೆ. ಅದರ ನಂತರ ಅನರ್ಹತೆಯ ಪ್ರಶ್ನೆಯು ಉದ್ಭವಿಸುವುದಿಲ್ಲ "ಎಂದು ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.ಒಂದೊಮ್ಮೆ ಸ್ಪೀಕರ್ ತಾವು ನಿರ್ಧಾರ ತೆಗೆದುಕೊಳ್ಲಲು ವಿಫಲವಾದಲ್ಲಿ ಆಗ ಸದಸ್ಯರು ನ್ಯಾಯಾಲಯದ ಮೊರೆ ಹೋಗಬಹುದು ಎಂದೂ ಅವರು ಹೇಳಿದ್ದಾರೆ.