ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಹಿನ್ನೆಲೆಯಲ್ಲಿ ಹಲವು ನಾಯಕರು ಹೇಳಿಕೆ ನೀಡಿದ್ದಾರೆ, ಸಿದ್ದರಾಮಯ್ಯ ಅವರೇ ನಮ್ಮ ನಾಯಕ ಎಂದು ಸಚಿವರುಗಳಾದ ಎಂಬಿ ಪಾಟೀಲ್, ಡಿ,ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಹಾಗೂ ಡಾ ಸುಧಾಕರ್ ಅವರ ಹೇಳಿಕೆಗಳು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ನಾಯಕರುಗಳ ಈ ದಿಢೀರ್ ಬದಲಾವಣೆಯ ಮರ್ಮ ಏನಿರಬಹುದು ಎಂದು ಎಲ್ಲರ ತಲೆಕೆಡಿಸಿದೆ.