ನಾನು ಮತ್ತೆ ಮಂತ್ರಿ ಆಗುತ್ತೇನೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ

 ತಾನು ಶೀಘ್ರದಲ್ಲೇ  ಮಂತ್ರಿಯಾಗುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.  ಹಿಂದೆ ತಾನು ಮಾತನಾಡಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ಅವರು ಮೂರೇ ತಿಂಗಳಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ:  ತಾನು ಶೀಘ್ರದಲ್ಲೇ  ಮಂತ್ರಿಯಾಗುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.  ಹಿಂದೆ ತಾನು ಮಾತನಾಡಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ಅವರು ಮೂರೇ ತಿಂಗಳಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು. ಈಗಲೂ ಹಾಗೇ ಆದರೆ ಆಶ್ಚರ್ಯಪಡಬೇಡಿ ಎಂದು ಯತ್ನಾಳ ಹೇಳಿದ್ದಾರೆ. ಈ ಮೂಲಕ ತನಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂದು ಪರೋಕ್ಷವಾಗಿ ಆಶಯ ವ್ಯಕ್ತಪಡಿಸಿದ್ದಾರೆ.

ಹಿಂದೆ ನಾನು ಆಲಮಟ್ಟಿ ಯೋಜನೆ ವಿಚಾರವಾಗಿ ಇದೇ ರೀತಿ ಜಗಳ ಮಾಡಿದ್ದೆ. ನಾನು ರಾಜೀನಾಮೆ ಕೊಡುತ್ತೇನೆ ಎಂದಾಗ ಅನಂತಕುಮಾರ್ ಅವರು ಕರೆದು ಬೈದಿದ್ದರು. ಮುಂದೆ 3 ತಿಂಗಳಲ್ಲಿ ವಾಜಪೇಯಿ ನನ್ನನ್ನು ಮಂತ್ರಿ ಮಾಡಿದ್ದರು ಎಂದು ಯತ್ನಾಳ ತಮ್ಮ ಹಳೆಯ ನೆನಪನ್ನು ಬಿಚ್ಚಿಟ್ಟಿದ್ದಾರೆ.

ಇಲ್ಲಿ ಕಗ್ಗೋಡದಲ್ಲಿ ಮಾತನಾಡಿದ ಅವರು, ತಾನು ನೆರೆ ಪರಿಹಾರದ ಬಗ್ಗೆ ಧ್ವನಿ ಎತ್ತಿದಾಗ ಬಹಳ ಮಂತ್ರಿ 15 ದಿನದಲ್ಲಿ ನನ್ನನ್ನು ಪಕ್ಷದಿಂದ ಹೊರಹಾಕುತ್ತಾರೆ ಎಂದಿದ್ದರು. ಆದರೆ, ಇನ್ನು 15 ದಿನದಲ್ಲಿ ತನಗೆ ಪ್ರಮೋಷನ್ ಸಿಕ್ಕರೆ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com