ಬೆಳಗಾವಿ: ಅನರ್ಹ ಶಾಸಕರಾದ ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಅವರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಫೈನಲ್ ಮಾಡಿದೆ, ಕಾಗವಾಡದಿಂದ ಪ್ರಕಾಶ್ ಹುಕ್ಕೇರಿ ಮತ್ತು ಅಥಣಿಯಿಂದ ರಾಜು ಕಾಗೆ ಅವರಿಗೆ ಟಿಕೆಟ್ ಫೈನಲ್ ಮಾಡಿದೆ.
ರಾಜುಕಾಗೆ ಕಾಗವಾಡ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಜೊತೆಗೆ ಅಥಣಿಯಲ್ಲೂ ಜನಪ್ರಿಯತೆ ಪಡೆದಿದ್ದರು, ಸ್ಥಳೀಯ ಸಂಸ್ಥಗಳು ಹಾಗೂ ಸಹಕಾರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಕಾಗವಾಡ ಕ್ಷೇತ್ರದಿಂದ ತಮ್ಮ ತಂದೆ ಪ್ರಕಾಶ್ ಹುಕ್ಕೇರಿ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತದೆ ಎಂದು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಹೇಳಿದ್ದರು. ಪ್ರಕಾಶ್ ಹುಕ್ಕೇರಿ ಅವರಿಂದ ಹೆಚ್ಚಿನ ಒತ್ತಾಯ ಬಂದಿದ್ದರಿಂದ, ಹೈಕಮಾಂಡ್ ಗುರುವಾರ ತಡರಾತ್ರಿ, ಅಥಣಿ ಗೆ ರಾಜು ಕಾಗೆಗೆ ಟಿಕೆಟ್ ನೀಡಿ, ಕಾಗವಾಡಕ್ಕೆ ಪ್ರಕಾಶ್ ಹುಕ್ಕೇರಿ ಅವರನ್ನು ಫೈನಲ್ ಮಾಡಿದೆ.
ಕಾಗವಾಡ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಸೇರುವುದರಿಂದ ಈ ಭಾಗದಲ್ಲಿ ಹುಕ್ಕೇರಿ ಕುಟುಂಬಕ್ಕೆ ಅಪಾರವಾದ ಜನ ಬೆಂಬಲವಿದೆ, ಹೀಗಾಗಿ ಪ್ರಕಾಶ್ ಹುಕ್ಕೇರಿಗೆ ಕಾಗವಾಡ ಟಿಕೆಟ್ ನೀಡಲಾಗಿದೆ.
Advertisement