ರಾಜ್ಯ ವಿಧಾನಸಭೆ ಅಧಿವೇಶನಕ್ಕೆ ಮುನ್ನ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ?

ಸಚಿವ ಸಂಪುಟದ ಕೆಲ ಸದಸ್ಯರ ನಂತರ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದೆ.  ಬಿಜೆಪಿ ಹೈಕಮಾಂಡ್ ನೊಂದಿಗೆ ಕ್ಯಾಬಿನೆಟ್ ವಿಸ್ತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ ಎರಡನೇ ವಾರದಲ್ಲಿ ಅವರು ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ನಿರೀಕ್ಷೆಯಿದೆ.
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಚಿವ ಸಂಪುಟದ ಕೆಲ ಸದಸ್ಯರ ನಂತರ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದೆ.  ಬಿಜೆಪಿ ಹೈಕಮಾಂಡ್ ನೊಂದಿಗೆ ಕ್ಯಾಬಿನೆಟ್ ವಿಸ್ತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ ಎರಡನೇ ವಾರದಲ್ಲಿ ಅವರು ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ನಿರೀಕ್ಷೆಯಿದೆ.

ಬಿ.ಎಸ್.ಯಡಿಯೂರಪ್ಪ ಕಳೆದ ವರ್ಷ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದಾಗಿನಿಂದ ದೆಹಲಿಗೆ ಹಲವು ಬಾರಿ ಹೋಗಿಬಂದಿದ್ದಾರೆ. ಹೆಚ಼್ಚಾಗಿ ಖಾತೆ ಹಂಚಿಕೆಗೆ ಗೆ ಅನುಮೋದನೆ ಪಡೆಯಲು. ಕಾಂಗ್ರೆಸ್-ಜೆಡಿಎಸ್ ತೊರೆದ 10 ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲುಅನುಮೋದನೆ ಪಡೆಯಲು ಜನವರಿಯಲ್ಲಿ ಅವರು ಕೊನೆಯ ಬಾರಿ ದೆಹಲಿಗೆ  ಭೇಟಿ ನೀಡಿದ್ದರು. ನೂತನ ಸಚಿವರು ರ ಫೆಬ್ರವರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಮಾರ್ಚ್ ನಂತರ ದೇಶಾದ್ಯಂತ ಕೊರೋನಾ ಲಾಕ್ ಡೌನ್ ಪ್ರಾರಂಭವಾಗಿತ್ತು. ಅಲ್ಲದೆ ಸಿಎಂ ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿ  ಆಸ್ಪತ್ರೆಗೆ ದಾಖಲಾಗಿ ಇದೀಗ ಗುಣಮುಖರಾಗಿದ್ದಾರೆ.

ಮುಖ್ಯಮಂತ್ರಿಯ ಕಚೇರಿಯ ಮೂಲಗಳು ಸಿಎಂ ತಿಂಗಳ ಅಂತ್ಯದವರೆಗೆ ಸಾಕಷ್ಟು ಗಿತ್ತುಪಡಿಸಿದ ಕಾರ್ಯಕ್ರಮ ಹೊಂದಿದ್ದಾರೆ ಎಂದು ಹೇಳಿದೆ. ಸೆಪ್ಟೆಂಬರ್ 21 ರಂದು ವಿಧಾನಸಭೆ ಅಧಿವೇಶನ  ಪ್ರಾರಂಭವಾಗುವ ಮೊದಲು ಸಿಎಂ ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಸಿಎಂ ಕನಿಷ್ಠ ತಿಂಗಳ ಅಂತ್ಯದವರೆಗೆ ಅವರೊಂದಿಗೆ ನೇಮಕಾತಿ ಪಡೆಯಲು ಸಾಧ್ಯವಾಗದೆ ಹೋಗಬಹುದು. 

ರಾಜ್ಯದಲ್ಲಿ ಐದು ಕ್ಯಾಬಿನೆಟ್ ಸ್ಥಾನಗಳು ಖಾಲಿ ಇದ್ದು  ಎಂ ಟಿ ಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಸೇರಿದಂತೆ ಕೆಲವು ಹೊಸ ಎಂಎಲ್‌ಸಿಗಳಿಗೆ ಸಿಎಂ ಪೋರ್ಟ್ಫೋಲಿಯೊಗಳನ್ನು ಹಂಚುವ ನಿರೀಕ್ಷೆಯಿದೆ, ’’ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರು ಪ್ರಧಾನಿ ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. "ಅವರ ಪ್ರವಾಸವು ಕೇಂದ್ರ ಮಂತ್ರಿಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ಡಿಜೆ ಹಳ್ಳಿ ಗಲಭೆಯ ನಂತರ ಎಸ್‌ಡಿಪಿಐ ಮತ್ತು ಪಿಎಫ್‌ಐ ಅನ್ನು ನಿಷೇಧಿಸುವಂತಹ ಇತರ ವಿಷಯಗಗಳ ಕುರಿತೂ ಚರ್ಚೆ ನಡೆಯಲಿದೆ. , ’’ ಎಂದು ಮೂಲಗಳು ತಿಳಿಸಿವೆ. ನೆರೆಯಿಂದ ಹಾನಿಗೀಡಾದ ಮನೆಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಪುನರ್ನಿರ್ಮಿಸಲು ಹಾನಿ ಮತ್ತು ವೆಚ್ಚದ ಅಂದಾಜಿನ ಬಗ್ಗೆ ವರದಿ ನೀಡುವಂತೆ ಗುರುವಾರ ಸಿಎಂ ಅವರು ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ಹಿರಿಯ ಸಚಿವರು ತಿಳಿಸಿದ್ದಾರೆ.

“ವರದಿಯನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸುವುದಾಗಿ ಸಿಎಂ ನಮಗೆ ಭರವಸೆ ನೀಡಿದ್ದಾರೆ,’ ’ಎಂದು ಸಚಿವರು ಹೇಳಿದರು.


ಇತ್ತೀಚೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿದೆಹಲಿಯಲ್ಲಿ ಬಿಜೆಪಿ ಮುಖಂಡರನ್ನು ಭೇಟಿಯಾದರು ಮತ್ತು ಎಂಎಲ್ ಸಿಗಳಾದ ಸಿ ಪಿ ಯೋಗೇಶ್ವರ ಮತ್ತು ವಿಶ್ವನಾಥ್ ಅವರನ್ನು ಸಚಿವರನ್ನಾಗಿಸಲು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು. ಅಲ್ಲದೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹ ಸಚಿವ ಸ್ಥಾನ ಉಳಿಸಿಕೊಳ್ಳುವ ಕುರಿತು ಚರ್ಚಿಸಲು ದೆಹಲಿಗೆ ತೆರಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com