ಮೈಸೂರು: ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ಅಂಬರೀಷ್ ಅಭಿಮಾನಿಗಳ ಎಂಟ್ರಿ

ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ನಟ ದಿವಂಗತ ಅಂಬರೀಷ್ ಅಭಿಮಾನಿಗಳು ಎಂಟ್ರಿ ನೀಡಿದ್ದಾರೆ. ಆದರೆ ಅವರ ಸ್ಪರ್ಧೆಗೆ ಸಂಸದೆ ಹಾಗೂ ಅಂಬರೀಷ್ ಪತ್ನಿ ಸುಮಲತಾ ಇನ್ನೂ ಒಪ್ಪಿಗೆ ನೀಡಿಲ್ಲ.
ಅಂಬರೀಷ್
ಅಂಬರೀಷ್
Updated on

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ನಟ ದಿವಂಗತ ಅಂಬರೀಷ್ ಅಭಿಮಾನಿಗಳು ಎಂಟ್ರಿ ನೀಡಿದ್ದಾರೆ. ಆದರೆ ಅವರ ಸ್ಪರ್ಧೆಗೆ ಸಂಸದೆ ಹಾಗೂ ಅಂಬರೀಷ್ ಪತ್ನಿ ಸುಮಲತಾ ಇನ್ನೂ ಒಪ್ಪಿಗೆ ನೀಡಿಲ್ಲ.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ಅಭಿಮಾನಿಗಳು ಕ್ಷೇತ್ರದಾದ್ಯಂತ ಸಂಚರಿಸಿ ಸುಮಲತಾ ಪರವಾಗಿ ಪ್ರಚಾರ ಮಾಡಿ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದರು. 

ಪಕ್ಷದ ಚಿಹ್ನೆಗಳ ಮೇಲೆ ಪಂಚಾಯತ್ ಚುನಾವಣೆಗಳು ಸ್ಪರ್ಧಿಸದಿದ್ದರೂ, ಕಾಂಗ್ರೆಸ್ ಅನ್ನು ಬೆಂಬಲಿಸುವ ಅನೇಕ ಸ್ಥಾನಗಳಲ್ಲಿ ಅಂಬರೀಶ್ ಅಭಿಮಾನಿಗಳು ಕಣಕ್ಕೆ ಇಳಿದಿದ್ದಾರೆ. ಇತ್ತೀಚೆಗೆ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿ ಬೆಂಬಲಿಸುತ್ತಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಕಹಳೆ ಚಿಹ್ನೆಯನ್ನು ಪ್ರದರ್ಶಿಸಲು ಕೆಲವು ಅಭಿಮಾನಿಗಳು ಆಯ್ಕೆ ಮಾಡಿಕೊಂಡಿದ್ದರೆ, ಇನ್ನೂ ಕೆಲವರು ರೈತ ಸಂಘದ ಬೆಂಬಲವನ್ನು ಕೋರಿದ್ದಾರೆ. ಅಭಿಮಾನಿ ಅಭ್ಯರ್ಥಿ ಬಿ ಎಸ್ ಪ್ರದೀಪ್ ಎಂಬುವರು ಅಂಬರೀಶ್ ಮತ್ತು ಸುಮಲತಾ ಇಬ್ಬರ ಚಿತ್ರಗಳನ್ನು ಬಳಸಿದ್ದಾರೆ ಮತ್ತು ಅವರ ಸಂಕೇತವನ್ನೂ
ಸಹ ಬಳಸಿದ್ದಾರೆ. 

ಅವರು ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಏಕೆಂದರೆ ಅದು ಸ್ಥಳೀಯ ಜನರಲ್ಲಿ ಒಗ್ಗಟ್ಟನ್ನು ವಿಭಜಿಸುತ್ತದೆ. ಎಲ್ಲರೂ ಸ್ಪರ್ಧಿಸಲು ಮುಕ್ತರಾಗಿದ್ದಾರೆ ಮತ್ತು ಸುಮಲತಾ ಅವರು ಒಂದೆರಡು ದಿನಗಳಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ ಎಂದು ಸುಮಲತಾ ಅವರ ಆಪ್ತ ಮದನ್ ಹೇಳಿದ್ದಾರೆ.

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆಂದು ಹಲವರು ಬರುತ್ತಿದ್ದಾರೆ. ನಾವು ಅವರು ಸ್ಪರ್ಧಿಸುವುದನ್ನು ಬೆಂಬಲಿಸಿಲ್ಲ ಅಥವಾ ಸ್ಪರ್ಧಿಸಬೇಡಿ ಎಂದು ತಡೆದಿಲ್ಲ, ಕೆಲವು ಅಭ್ಯರ್ಥಿಗಳು ‘ಕಹಳೆ ಊದುವ ಮನುಷ್ಯ’ ಚಿಹ್ನೆಯನ್ನು ಬಳಸಲು ಮುಂದಾಗಿದ್ದಾರೆ. ಆದರೆ ಈ ಚಿಹ್ನೆ ಯಾವುದೇ ನೋಂದಾಯಿತ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ, ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ತಮ್ಮ ಚಿಹ್ನೆಯನ್ನಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಮದನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com