ಶಿರಾ: ಉಪಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೇಸರಿ ಪಕ್ಷ, ತಳಮಟ್ಟದಲ್ಲಿ ಬಲವರ್ಧನೆಗೆ ಮುಂದಾದ ಬಿಜೆಪಿ

ನವೆಂಬರ್ 3 ರಂದು ವಿಧಾನಸಭೆ ಉಪಚುನಾವಣೆ ನಡೆದಿದ್ದ ಶಿರಾದಲ್ಲಿ ಇಂದು (ಡಿಸೆಂಬರ್ 27)ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ವಿಶೇಷವೆಂದರೆ ಜನರ ಉತ್ಸಾಹ ಇಲ್ಲಿಯೂ ಕಡಿಮೆ ಇಲ್ಲ. ವಿಧಾನಸಭೆ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯನ್ನು ಪುಡಿಗಟ್ಟಿದ ಬಿಜೆಪಿ ಇದೀಗ ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.
ಶಿರಾ: ಉಪಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕೇಸರಿ ಪಕ್ಷ, ತಳಮಟ್ಟದಲ್ಲಿ ಬಲವರ್ಧನೆಗೆ ಮುಂದಾದ ಬಿಜೆಪಿ
Updated on

ತುಮಕೂರು: ನವೆಂಬರ್ 3 ರಂದು ವಿಧಾನಸಭೆ ಉಪಚುನಾವಣೆ ನಡೆದಿದ್ದ ಶಿರಾದಲ್ಲಿ ಇಂದು (ಡಿಸೆಂಬರ್ 27)ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ವಿಶೇಷವೆಂದರೆ ಜನರ ಉತ್ಸಾಹ ಇಲ್ಲಿಯೂ ಕಡಿಮೆ ಇಲ್ಲ. ವಿಧಾನಸಭೆ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯನ್ನು ಪುಡಿಗಟ್ಟಿದ ಬಿಜೆಪಿ ಇದೀಗ ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆಯ ಮೇಲೆ ನಡೆಯದೇ ಹೋದರೂ ಸರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆಂದು ತಿಳಿದುಬಂದಿದೆ. ಉಪಚುನಾವಣೆ ಅಭಿಯಾನದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭರವಸೆ ನೀಡಿದಂತೆ ಹೇಮಾವತಿ ನೀರು  ಹರಿಯುತ್ತಿರುವುದುಪಕ್ಷಕ್ಕೆ ವಿಶ್ವಾಸ ತಂದಿದೆ. ಕೇಸರಿ ಶಾಲು ಧರಿಸಿ ಅಭ್ಯರ್ಥಿಗಳು ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಡಾ ಸಿ ಎಂ ರಾಜೇಶ್ ಗೌಡರ ಬೆಂಬಲಿಗರಾಗಿ ತಮ್ಮನ್ನು ತಾವು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

“ಮಡಲೂರಿನಲ್ಲಿ, ಉಪಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ್ದ ತಮ್ಮ ಬೆಂಬಲಿಗರಿಗೆ ಶಾಸಕ ರಾಜೇಶ್ ಗೌಡ  ಬೆಂಬಲ ನೀಡುತ್ತಿದ್ದಾರೆ. ”ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಜ್ಯೋತಪ್ಪ ಗೌಡ ಹೇಳಿದ್ದಾರೆ. "ಬಿಜೆಪಿಯೊಂದಿಗಿರುವ ನನ್ನ ಸಂಬಂಧಿ ಶಂಕರ್ ಸ್ಪರ್ಧಿಸುತ್ತಿದ್ದಾರೆ ಮತ್ತು ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ" ಎಂದು ಅವರು ಹೇಳಿದರು. ಆಂಧ್ರಪ್ರದೇಶದ ಗಡಿಯಲ್ಲಿರುವ ತಡಕಲೂರು ಗ್ರಾಮ ಪಂಚಾಯತ್, ತಿಮ್ಮನಹಳ್ಳಿ ಲಕ್ಕನಹಳ್ಳಿಯಂತಹ ಸ್ಥಳಗಳಲ್ಲಿಯೂ ಬಿಜೆಪಿ ಪ್ರಬಲವಾಗುತ್ತಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಖರ್ಚು ಮಾಡಲು ಯಾವುದೇ ನಿರ್ಬಂಧಗಳಿಲ್ಲದ ಕಾರಣ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭಾರಿ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ."ಹಳ್ಳಿಗಳಲ್ಲಿ ಅಭ್ಯರ್ಥಿಗಳ ಪ್ರತಿಷ್ಠೆ ಅಪಾಯದಲ್ಲಿರುವುದರಿಂದ ಅವರ ಪ್ರತಿಸ್ಪರ್ಧಿಗಳು ಸಹ ತಮ್ಮ ಹಣಕ್ಕಾಗಿ ಓಟವನ್ನು ನೀಡುತ್ತಿದ್ದಾರೆ" ಸ್ಥಳೀಯ ಮುಖಂಡ ಗೋಮಾರದಹಳ್ಳಿ ಮಂಜುನಾಥ್ ಹೇಳಿದ್ದಾರೆ. ಉಪಚುನಾವಣೆಯಲ್ಲಿ ರಾಜೇಶ್ ಗೌಡ ಅವರನ್ನು ಬೆಂಬಲಿಸಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಕಾರ್ಯಕರ್ತ ಟಿ.ಕೃಷ್ಣಮೂರ್ತಿ ಅವರು ಚುನಾವಣಾ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com