ಬಿಜೆಪಿ ಸರ್ಕಾರ ಬರಲು ಯೋಗೇಶ್ವರ್ ತ್ಯಾಗ ಇಲ್ಲ:  ಎಂಟಿಬಿ ನಾಗರಾಜ್​ಗೆ ಕೊಡಿ!

ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್​ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್​. ವಿಶ್ವನಾಥ್​ ಕುಟುಕಿದ್ದಾರೆ.
ಯೋಗೇಶ್ವರ್
ಯೋಗೇಶ್ವರ್
Updated on

ಮೈಸೂರು: ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್​ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್​. ವಿಶ್ವನಾಥ್​ ಕುಟುಕಿದ್ದಾರೆ.

ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ಯಾವುದೇ ಅಭ್ಯಂತರ ಇಲ್ಲ. ಆದರೆ ಯೋಗೇಶ್ವರ್‌ಗೆ ಮಂತ್ರಿಗಿರಿ ಕೊಡುವುದನ್ನು ಯಾರೂ ಒಪ್ಪುತ್ತಿಲ್ಲ. ಈ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ‌ ಕೊಡುವ ಅಗತ್ಯವಿದೆಯೇ  ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್ ಸಿಪಿವೈಗೆ ಸಚಿವ ಸ್ಥಾನ ಕೊಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನಗೆ ಸಚಿವ ಸ್ಥಾನ ಮಿಸ್ ಆಗಿದೆ. ರಾಜಕಾರಣದಲ್ಲಿ  ಕೆಲವು ಸಲ ಹೀಗೆ ಮಿಸ್ ಆಗುತ್ತೆ. ಸಿಎಂ ಬಿಎಸ್​ವೈ ಜೊತೆ ನಾನು ಮಾತನಾಡಿದ್ದೇನೆ. ಜೂನ್ ನಂತರದಲ್ಲಿ ಅವಕಾಶ ಸಿಗಬಹುದು ಅಂತ ಸಿಎಂ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com