ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿಲ್ಲ: ಮೋದಿ, ಶಾ ಬಂದ ಬಳಿಕ ಗಂಡಾಂತರ - ಸಿಎಂ ಇಬ್ರಾಹಿಂ

ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿಲ್ಲ. ಮೋದಿ, ಅಮಿತ್ ಶಾ ಬಂದ ಬಳಿಕ ಗಂಡಾಂತರ ಎದುರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ
Updated on

ಸಂಡೂರು: ಹಿಂದೂ ಧರ್ಮಕ್ಕೆ ಗಂಡಾಂತರ ಬಂದಿಲ್ಲ. ಮೋದಿ, ಅಮಿತ್ ಶಾ ಬಂದ ಬಳಿಕ ಗಂಡಾಂತರ ಎದುರಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹ ಹೇಳಿಕೆ ನೀಡುವುದು ಕೆಟ್ಟ ಬೆಳವಣಿಗೆ,ನಾವು ಹೇಳಿಕೆ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ಯೋಚನೆ ಮಾಡಿ ಹೇಳಿಕೆ ನೀಡಬೇಕು. ನನ್ನ ರಾಜಕೀಯ ಇತಿಹಾಸದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ರಾಜ್ಯದಲ್ಲಿ ನೋಡಿರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಗೆ ಎನ್ಆರ್ ಸಿ, ಸಿಎಎ ತೆಗೆಯುವ ಯೋಚನೆ ಇಲ್ಲ.ಸಿಎಎ, ಎನ್ ಪಿಆರ್,ಎನ್ಆರ್​ಸಿ ಜಾರಿ ಬಗ್ಗೆ ಮೋದಿ ಹಾಗೂ ಅಮಿತ್ ಷಾ ಗೆ ಪತ್ರ ಬರೆದಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೋದಿ  ನಕ್ಸಲರ ಜೊತೆ, ಡಾಕುಗಳ ಜೊತೆ ಮಾತನಾಡುತ್ತಾರೆ ಆದರೆ ಮುಸ್ಲಿಂ ಮುಖಂಡರು, ಶಾಹೀನ್ ಬಾಗ್​​ ಬಗ್ಗೆ ಮಾತಾಡಲು ನಿಮಗೆ ಏನು ತೊಂದರೆ ಎಂದು ಪ್ರಶ್ನಿಸಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com