ನಾಯಕನ ನಿರೀಕ್ಷೆ ಬೇಡ , ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು: ಉಪೇಂದ್ರ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜನರ ತಲೆಗೆ ಹುಳ ಬಿಡುವ  ನಟ,  ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಪ್ರಶ್ನಿಸಿದ್ದಾರೆ
ಉಪೇಂದ್ರ
ಉಪೇಂದ್ರ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜನರ ತಲೆಗೆ ಹುಳ ಬಿಡುವ  ನಟ,  ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಪ್ರಶ್ನಿಸಿದ್ದಾರೆ
  
“ಸರ್ಕಾರದ ಬೊಕ್ಕಸದಲ್ಲಿರುವ ಒಂದೊಂದು ಪೈಸೆಯೂ ನಿಮ್ಮದು ಅಂದಮೇಲೆ ಅದರ ಮೇಲಿನ ಅಧಿಕಾರ ನಿರ್ಧಾರ ನಿಮ್ಮದೇ ಆಗಿರಬೇಕಲ್ಲವೇ ? ಬರೀ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಮತ್ತು ತಂತ್ರಜ್ಞಾನದಿಂದ ಇದನ್ನು ನೀವೇ ಮಾಡಬಹುದು ಎಂದಾದರೆ ಒಬ್ಬ ನಾಯಕ ನಿಮಗೆ ಬೇಕೇ ?” ಎಂದು ಟ್ವೀಟ್ ಮಾಡಿದ್ದಾರೆ.
  
ಮತ್ತೊಂದು ಟ್ವೀಟ್‍ನಲ್ಲಿ, “ವಿಚಾರ” ಮುಖ್ಯ “ನಾನು” ಎಂಬುದು ಪ್ರಜಾಕೀಯದಲ್ಲಿ ಮುಖ್ಯವಲ್ಲ ಎಂದು ಹೇಳುತ್ತಲೇ ಬರುತ್ತಿದ್ದೇವೆ. ಆ ಅರ್ಥದಲ್ಲೇ ಉಪ್ಪಿ ಚುನಾವಣೆಗೆ ನಿಲ್ಲುವುದು ಬಿಡುವುದು ಮುಖ್ಯವಲ್ಲ ನಾಯಕನ ನಿರೀಕ್ಷೆ ಬೇಡ , ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು ಎಂದು ಹೇಳಿದ್ದೆ. ಇದು ಸರಿಯಲ್ಲವೇ ? ಈ ವ್ಯವಸ್ಥೆ ತರುವುದೇ ನಮ್ಮೆಲ್ಲರ ಜವಾಬ್ದಾರಿಯಲ್ಲವೇ  ಎಂದು ಉಪೇಂದ್ರ ಕೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com