ಮುಸ್ಲಿಂರನ್ನು ಭಾರತದಿಂದ ಓಡಿಸುವುದಿದ್ದರೆ 1947ರಲ್ಲಿಯೇ ಓಡಿಸುತ್ತಿದ್ದೆವು: ಸಂಸದ ಭಗವಂತ ಖೂಬಾ

ಮುಸ್ಲಿಮರನ್ನು ಭಾರತದಿಂದ ಓಡಿಸುವುದಿದ್ದರೆ 1947 ರಲ್ಲಿಯೇ ಓಡಿಸುತ್ತಿದ್ದೆವು. ಆದರೆ ಅಂತಹ ಯಾವುದೇ ಉದ್ದೇಶ ನಮಗಿಲ್ಲ ಎಂದು ಸಂಸದ ಭಗವಂತ ಖೂಬಾ ಹೇಳಿಕೆ ನೀಡಿದ್ದಾರೆ.
ಭಗವಂತ ಖೂಬಾ
ಭಗವಂತ ಖೂಬಾ

ಬಾಗಲಕೋಟೆ: ಮುಸ್ಲಿಮರನ್ನು ಭಾರತದಿಂದ ಓಡಿಸುವುದಿದ್ದರೆ 1947 ರಲ್ಲಿಯೇ ಓಡಿಸುತ್ತಿದ್ದೆವು. ಆದರೆ ಅಂತಹ ಯಾವುದೇ ಉದ್ದೇಶ ನಮಗಿಲ್ಲ ಎಂದು ಸಂಸದ ಭಗವಂತ ಖೂಬಾ ಹೇಳಿಕೆ ನೀಡಿದ್ದಾರೆ. 

ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಿಂದ ಯಾರನ್ನೂ ಓಡಿಸುವ ಉದ್ದೇಶ ನಮಗಿಲ್ಲ.  ಕಾಂಗ್ರೆಸ್ ಮತ್ತು ಎಡಪಂಥೀಯರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಲಿಮರು ಕಾಂಗ್ರೆಸ್‌ನವರು, ಎಡ ಪಕ್ಷಗಳ ಮಾತು ನಂಬಿ ಮೋಸ ಹೋಗಬಾರದು,  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಬೇಕು ಎಂದು  ಖೂಬಾ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com