'ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಮೊದಲಲ್ಲ: ಕಾಂಗ್ರೆಸ್‌ ಹಿಂದೆಯೂ ದೇಶದ ಪರವಾಗಿ ನಿಂತಿಲ್ಲ'

ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ಆರೋಪಿಸಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ಆರೋಪಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಉತ್ಪಾದಿಸಿದ ಲಸಿಕೆಗಳನ್ನು ವಿದೇಶಗಳಿಗೆ ಹಂಚಿದ್ದಾರೆ, ಪರಿಣಾಮ ದೇಶಾದ್ಯಂತ ಲಸಿಕೆ ಕೊರತೆ ಎದುರಾಗಿದೆ. ಇಷ್ಟಾದರೂ ರಫ್ತು ನಿಷೇಧ ಹೇರಲಿಲ್ಲ ಎಂದು ಹೇಳಿದೆ, ದೇಶಕ್ಕೆಸಗಿದ ಇಂತಹ ದ್ರೋಹವನ್ನು ಬಿಜೆಪಿ ಲಜ್ಜೆ ಬಿಟ್ಟು ಸುಳ್ಳುಗಳ ಮೂಲಕ ಸಮರ್ಥನೆಗೆ ಇಳಿದಿದೆ ಎಂದು ಕಿಡಿಕಾರಿದೆ,

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬುವುದು ಸುಳ್ಳು ಹಾಗೂ ವದಂತಿಯಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ, ಸುಳ್ಳುಗಳ ಮೂಲಕ ದೇಶದ ಜನತೆಗೆ ತಪ್ಪು ಮಾಹಿತಿ ತಲುಪಿಸುತ್ತಿರುವ ವಿಪಕ್ಷಗಳ ಷಡ್ಯಂತ್ರಕ್ಕೆ ಬಲಿಯಾಗದಿರೋಣ. ಕಾಂಗ್ರೆಸ್‌ ಹಿಂದೆಯೂ ದೇಶದ ಪರವಾಗಿ ನಿಂತಿಲ್ಲ, ಮುಂದೆಯೂ ನಿಲ್ಲುವುದಿಲ್ಲ ಎಂದು ತಿರುಗೇಟು ನೀಡಿದೆ.

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬ ವದಂತಿ ಸುಳ್ಳು ಮಾಹಿತಿಯಾಗಿದ್ದು, ಇದನ್ನು ನಂಬದಿರೋಣ ಎಂದು ಟ್ವೀಟ್‌ ನಲ್ಲಿ ಹೇಳಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕ ಈ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com