ನಾಸೀರ್ ಹುಸೇನ್
ನಾಸೀರ್ ಹುಸೇನ್

ರಾಜ್ಯಸಭೆ ಸಚೇತಕರಾಗಿ ಕರ್ನಾಟಕದ ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಸೈಯ್ಯದ್ ನೇಮಕ

ರಾಜ್ಯದ ಮತ್ತೊಬ್ಬ ಸಂಸದ ಡಾ. ಸೈಯದ್ ನಸೀರ್ ಹುಸೇನ್ ಅವರನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಆಗಿ ನೇಮಕ ಮಾಡಲಾಗಿದೆ.
Published on

ಬೆಂಗಳೂರು: ಕರ್ನಾಟಕ ಸಂಸದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ವಾರಗಳ ನಂತರ, ರಾಜ್ಯದ ಮತ್ತೊಬ್ಬ ಸಂಸದ ಡಾ. ಸೈಯದ್ ನಸೀರ್ ಹುಸೇನ್ ಅವರನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ  ಸಚೇತಕರಾಗಿ ನೇಮಕ ಮಾಡಲಾಗಿದೆ. ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಕರ್ನಾಟಕದ ಸಂಸದರಾಗಿದ್ದು, ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ 38 ಸದಸ್ಯರನ್ನು ಹೊಂದಿದೆ. ಮುಖ್ಯ ಸಚೇತಕ ಮತ್ತು ಸಚೇತಕ ಈ ಇಬ್ಬರೂ ಕಾಂಗ್ರೆಸ್ ಸದಸ್ಯರು ಮತ್ತು ನಾಯಕರು ಮತ್ತು ವಿರೋಧ ಪಕ್ಷಗಳ ಸದಸ್ಯರೊಂದಿಗೆ ಸಮನ್ವಯ ಸಾಧಿಸುತ್ತಾರೆ. ಅವರು ಸದನದ ಅಧಿವೇಶನದ ಅವಧಿಯನ್ನು ನಿರ್ಧರಿಸುವ ಸಲಹಾ ಸಮಿತಿ ಸಭೆಗಳಿಗೂ ಹಾಜರಾಗುತ್ತಾರೆ. ಸದನದಲ್ಲಿ ಯಾರು ಮಾತನಾಡಬೇಕು ಮತ್ತು ಸ್ಪೀಕರ್‌ಗಳ ಆದೇಶ, ಮತ ಚಲಾಯಿಸುವುದು, ಹೊರಹೋಗುವುದು ಮತ್ತು ಸದನದಲ್ಲಿ ಪಕ್ಷದ ನಿಲುವಿನ ಬಗ್ಗೆ ಈ ಇಬ್ಬರು ನಿರ್ಧರಿಸುತ್ತಾರೆ.

ಮಾಜಿ ವಿದ್ಯಾರ್ಥಿ ನಾಯಕ, ಹುಸೇನ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿದ್ದರು. ರಾಜ್ಯಸಭೆಯಲ್ಲಿ ಮತ್ತು  ಕೃಷಿ ಮಸೂದೆಗಳ ವಿರುದ್ಧ ಅವರು ವಿರೋಧ ಪಕ್ಷದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. 

ಕರ್ನಾಟಕದಲ್ಲಿ ಪಕ್ಷಕ್ಕೆ ಹೆಚ್ಚಿನ ಮನ್ನಣೆ ದೊರೆತಿರುವುದು ಗೌರವದ ವಿಷಯವಾಗಿದೆ ಎಂದು ಕಾಂಗ್ರೆಸ್ ಸಂಸದ ಎಲ್.ಹನುಮಂತಯ್ಯ ಹೇಳಿದ್ದಾರೆ. ಕಾಂಗ್ರೆಸ್ ಸಂಸದರಾದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್, ಎಲ್ ಹನುಮಂತಯ್ಯ, ಜಿ ಸಿ ಚಂದ್ರಶೇಖರ್ ಮತ್ತು ನಾಸೀರ್ ಹುಸೇನ್ ಜೊತೆಗೆ,  ಒಬ್ಬರೇ ಜೆಡಿಎಸ್ ಸಂಸದ ಹೆಚ್ ಡಿ ದೇವೇಗೌಡ ಮೇಲ್ಮನೆಯಲ್ಲಿ ಇದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com