ದಾವಣಗೆರೆ: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಅಖಿಲ ಬಹರತ ವೀರಶೈವ ಮಹಾಸಭಾ ಎಂದಿಗೂ ಸಿಎಂ ಯಡಿಯೂರಪ್ಪ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
"ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಪರವಾಗಿ ಮಹಾಸಭಾ ನಿಲ್ಲಲಿದೆ. ಕೋವಿಡ್-19 ಸಮಸ್ಯೆ ಇನ್ನೂ ಮುಂದುವರೆದಿದ್ದು, ಸಿಎಂ ಬದಲಾವಣೆ ಸಾಧ್ಯತೆ ಕ್ಷೀಣ" ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ
ಮುಂದುವರೆದು, "ಸಮುದಾಯದ ಸ್ವಾಮೀಜಿಗಳೂ ಈ ವಿಷಯವಾಗಿ ಮಾತನಾಡಿದ್ದು, ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ ಹಾಗೂ ಮಹಾಸಭಾ ಸಹ ಯಡಿಯೂರಪ್ಪ ಬೆಂಬಲಕ್ಕೆ ಇರಲಿದೆ ಎಂದಿರುವ ಅವರು, ನನ್ನ ರಾಜಕೀಯ ನಿಷ್ಠೆ ಹಾಗೂ ವೀರಶೈವ ಮಹಾಸಭಾದ ನಿಷ್ಠೆ ಎರಡೂ ಬೇರೆ ಬೇರೆ ವಿಷಯಗಳು ಎಂದೂ ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಶಾಸಕರೂ ಆಗಿರುವ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದ್ದಾರೆ. ವೀರಶೈವ ಮಹಾಸಭಾದ ಹೇಳಿಕೆಯಿಂದ ಯಡಿಯೂರಪ್ಪ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
Advertisement