ಹಗರಣಕ್ಕೆ ಕಡಿವಾಣ ಹಾಕಿದ್ದಕ್ಕೆ ಬಿಜೆಪಿಯಿಂದ ದಾಂಧಲೆ: ಕಾಂಗ್ರೆಸ್

ಬಿಜೆಪಿಯ "ಹಾಸಿಗೆ - ಹೇಸಿಗೆ" ಪಟಾಲಂ ಮೊನ್ನೆ ನಡೆಸಿದ ಮಹಾ ನಾಟಕದ ದೃಶ್ಯಗಳು ಒಂದೊಂದಾಗಿಯೇ ಬಯಲಾಗುತ್ತಿವೆ. ಅದು ಹಗರಣ ಬಯಲಿಗೆಳೆದಿದ್ದಲ್ಲ ಬದಲಿಗೆ ಅಧಿಕಾರಿಗಳು ಹಗರಣಕ್ಕೆ ಕಡಿವಾಣ ಹಾಕಿ ತನಿಖೆಗೆ ಅದೇಶಿಸಿದ್ದನ್ನು ಸಹಿಸದೆ ನಡೆಸಿದ ದಾಂಧಲೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಜೆಪಿಯ "ಹಾಸಿಗೆ-ಹೇಸಿಗೆ" ಪಟಾಲಂ ಮೊನ್ನೆ ನಡೆಸಿದ ಮಹಾ ನಾಟಕದ ದೃಶ್ಯಗಳು ಒಂದೊಂದಾಗಿಯೇ ಬಯಲಾಗುತ್ತಿವೆ. ಅದು ಹಗರಣ ಬಯಲಿಗೆಳೆದಿದ್ದಲ್ಲ ಬದಲಿಗೆ ಅಧಿಕಾರಿಗಳು ಹಗರಣಕ್ಕೆ ಕಡಿವಾಣ ಹಾಕಿ ತನಿಖೆಗೆ ಅದೇಶಿಸಿದ್ದನ್ನು ಸಹಿಸದೆ ನಡೆಸಿದ ದಾಂಧಲೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಪಕ್ಷದ ಬೆಡ್ ಬ್ಲಾಕಿಂಗ್ ಭಯೋತ್ಪಾದಕರ ಬಂಧನ, ತನಿಖೆ ಆಗಲೇಬೇಕು ಎಂದು ಆಗ್ರಹಿಸಿದೆ.

ಲಸಿಕೆ ನೋಂದಣಿ ಬಂದ್ ಆಗಿದೆ. ರಾಜ್ಯದಲ್ಲಿ 18+ ನವರ ಲಸಿಕೆ ನೋಂದಣಿಯನ್ನು ನಿರಾಕರಿಸಲಾಗಿದೆ.. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದಂತೆ ಲಸಿಕೆ ತರಿಸದೆಯೇ ಅಬ್ಬರದ ಪ್ರಚಾರ ಮಾಡಿದ ಸರ್ಕಾರ ಈಗ ನಾಡಿದ ಜನತೆಗೆ ದ್ರೋಹ ಎಸಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಸಾಮರ್ಥ್ಯದ ಪ್ರತೀಕವಿದು ಎಂದು ಕಿಡಿಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com