ಜೀವನದುದ್ದಕ್ಕೂ ಗುಲಾಮಗಿರಿಯಲ್ಲೇ ಬದುಕು ಕಟ್ಟಿಕೊಂಡ ನಕಲಿ ಗಾಂಧಿ ಕುಟುಂಬದ ಪಾದಸೇವಕ ನಿರ್ಲಕ್ಷ್ಯಕಷ್ಟೇ ಯೋಗ್ಯ!

ಕೇಂದ್ರ ಸಂಪುಟದ ಸಚಿವರು ಹಾಗೂ ಪ್ರಧಾನಿ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ವಿರುದ್ಧ ಕರ್ನಾಟಕ ಬಿಜೆಪಿ ಹರಿಹಾಯ್ದಿದೆ. 
ಬಿಕೆ ಹರಿಪ್ರಸಾದ್
ಬಿಕೆ ಹರಿಪ್ರಸಾದ್

ಬೆಂಗಳೂರು: ಕೇಂದ್ರ ಸಂಪುಟದ ಸಚಿವರು ಹಾಗೂ ಪ್ರಧಾನಿ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ವಿರುದ್ಧ ಕರ್ನಾಟಕ ಬಿಜೆಪಿ ಹರಿಹಾಯ್ದಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕೇಂದ್ರ ಸಂಪುಟದ ಸಚಿವರು ಹಾಗೂ ಪ್ರಧಾನಿ ಬಗ್ಗೆ ನಕಲಿ ಗಾಂಧಿ ಕುಟುಂಬದ ಪಾದಸೇವಕ ಬಿ.ಕೆ.ಹರಿಪ್ರಸಾದ್ ಅವರು ತುಚ್ಛವಾಗಿ ಮಾತನಾಡಿದ್ದಾರೆ. ಅವರದೇ ಶೈಲಿಯಲ್ಲಿ ತಿರುಗೇಟು ನೀಡಬಹುದು. ಆದರೆ ಕೆಸರಿಗೆ ಕಲ್ಲು ಹಾಕಿ ಮೈಮೇಲೆ ಮೆತ್ತಿಕೊಳ್ಳಲು ಸಾಧ್ಯವೇ? ಜೀವನದುದ್ದಕ್ಕೂ ಗುಲಾಮಗಿರಿಯಲ್ಲೇ ಬದುಕು ಕಟ್ಟಿಕೊಂಡ ಈ ವ್ಯಕ್ತಿ ನಿರ್ಲಕ್ಷ್ಯಕಷ್ಟೇ ಯೋಗ್ಯ  ಎಂದು ಹೇಳಿದೆ.

56 ಇಂಚಿನ ಎದೆಯ ಪ್ರಧಾನಿ ಏಳು ವರ್ಷ ಕಳೆದ್ರೂ ಮಾದ್ಯಮಗಳ ಮುಂದೆ ಬರುತ್ತಿಲ್ಲ. ಬರೀ ಭಾಷಣದಲ್ಲಿ ಹಿಂದಿ ಡೈಲಾಗ್ ಹೊಡೆಯೊದಕ್ಕೆ 56 ಇಂಚು ಸಿಮೀತ ಆಗಿದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದರು. ದೂರದರ್ಶನ ಈಗ ದುಷ್ಟರ ದರ್ಶನ ಆಗಿದೆ. ದೇಶದ ಯಾವುದೇ ವಿಚಾರಗಳನ್ನ ಅದರಲ್ಲಿ ಹೇಳುತ್ತಿಲ್ಲ. ಮೋದಿ,ಅಮಿತ್ ಶಾ,ಗಡ್ಕರಿ ಸೇರಿ ಐದು ಜನ ಮಾತ್ರ ಈ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಇನ್ನೂ ಉಳಿದ ಸಚಿವರು ಸರ್ಕಾರದಲ್ಲಿ ಚೀಯರ್ ಗರ್ಲ್ಸ್ ರೀತಿ ಆಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com