ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ತಿವಿಯುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಒಲಿಂಪಿಕ್ಸ್ ಸ್ಪರ್ಧಿಗಳ ಜೊತೆ ಚಹಾ ಸೇವಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಚಾಟಿ ಬೀಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಕ್ರೀಡಾಪಟುಗಳ ಬೆವರಿನಲ್ಲಿ ನಿಮ್ಮ ಪ್ರಚಾರದ ಬಯಕೆ ತೀರಿಸಿಕೊಂಡು ಚಹಾ ಸೇವಿಸುವ ನರೇಂದ್ರ ಮೋದಿ ಅವರೇ ಕ್ರೀಡೆಗೆ ತಾವು ಅಷ್ಟು ಗೌರವಿಸುವುದಾದರೆ, ನಿಮ್ಮದೇ ಸರ್ಕಾರದ ಸಚಿವೆ ಸ್ಮೃತಿ ಇರಾನಿ ಕ್ರೀಡಾಪಟುವಿಗೆ ಲಂಚದ ಬೇಡಿಕೆ ಇಟ್ಟ ಪ್ರಕರಣದ ತನಿಖೆ ನಡೆಸಲಿಲ್ಲ ಏಕೆ ಎಂದು ಪ್ರಶ್ನಿಸಿದೆ. ಒಮ್ಮೆ ವರ್ತಿಕಾ ಸಿಂಗ್ರೊಂದಿಗೂ ಚಹಾ ಸೇವಿಸಿ ಅವರ ಅಳಲು ಕೇಳಿ ನೋಡೋಣ ಎಂದು ತಿಳಿಸಿದೆ.
ಅಡುಗೆ ಅನಿಲದ ಬೆಲೆ ಒಂದೇ ತಿಂಗಳ ಅಂತರದಲ್ಲಿ ಮತ್ತೊಮ್ಮೆ 25 ರು. ಏರಿಕೆಯಾಗಿದೆ ಸಾವಿರದ ಗಡಿ ತಲುಪಿದೆ, ಬೆಲೆ ಏರಿಕೆಯಿಂದ ಎಲ್ ಪಿ ಜಿ ಗ್ರಾಹಕರು ಕಡಿಮೆಯಾಗಿದ್ದನ್ನು ಮನಗಂಡು ಮತ್ತಷ್ಟು ಗ್ರಾಹಕರನ್ನ ಸೆಳೆದು ಕೊಡಲು "ಉಜ್ವಲ 2.0" ಎಂದಿದ್ದರು, ಅನಿಲ ಕಂಪೆನಿಗಳ ಮಾರ್ಕೆಟಿಂಗ್ ಏಜೆಂಟ್ ನರೇಂದ್ರ ಮೋದಿ ಅವರು, ಇದೇನಾ ಅಚ್ಛೆ ದಿನ್ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
Advertisement