ಹಗರಣಕ್ಕೆ ಕಡಿವಾಣ ಹಾಕಿದ್ದಕ್ಕೆ ಬಿಜೆಪಿಯಿಂದ ದಾಂಧಲೆ: ಕಾಂಗ್ರೆಸ್
ಬಿಜೆಪಿಯ "ಹಾಸಿಗೆ - ಹೇಸಿಗೆ" ಪಟಾಲಂ ಮೊನ್ನೆ ನಡೆಸಿದ ಮಹಾ ನಾಟಕದ ದೃಶ್ಯಗಳು ಒಂದೊಂದಾಗಿಯೇ ಬಯಲಾಗುತ್ತಿವೆ. ಅದು ಹಗರಣ ಬಯಲಿಗೆಳೆದಿದ್ದಲ್ಲ ಬದಲಿಗೆ ಅಧಿಕಾರಿಗಳು ಹಗರಣಕ್ಕೆ ಕಡಿವಾಣ ಹಾಕಿ ತನಿಖೆಗೆ ಅದೇಶಿಸಿದ್ದನ್ನು ಸಹಿಸದೆ ನಡೆಸಿದ ದಾಂಧಲೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
Published: 07th May 2021 11:50 AM | Last Updated: 07th May 2021 12:59 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬಿಜೆಪಿಯ "ಹಾಸಿಗೆ-ಹೇಸಿಗೆ" ಪಟಾಲಂ ಮೊನ್ನೆ ನಡೆಸಿದ ಮಹಾ ನಾಟಕದ ದೃಶ್ಯಗಳು ಒಂದೊಂದಾಗಿಯೇ ಬಯಲಾಗುತ್ತಿವೆ. ಅದು ಹಗರಣ ಬಯಲಿಗೆಳೆದಿದ್ದಲ್ಲ ಬದಲಿಗೆ ಅಧಿಕಾರಿಗಳು ಹಗರಣಕ್ಕೆ ಕಡಿವಾಣ ಹಾಕಿ ತನಿಖೆಗೆ ಅದೇಶಿಸಿದ್ದನ್ನು ಸಹಿಸದೆ ನಡೆಸಿದ ದಾಂಧಲೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಪಕ್ಷದ ಬೆಡ್ ಬ್ಲಾಕಿಂಗ್ ಭಯೋತ್ಪಾದಕರ ಬಂಧನ, ತನಿಖೆ ಆಗಲೇಬೇಕು ಎಂದು ಆಗ್ರಹಿಸಿದೆ.
ಲಸಿಕೆ ನೋಂದಣಿ ಬಂದ್ ಆಗಿದೆ. ರಾಜ್ಯದಲ್ಲಿ 18+ ನವರ ಲಸಿಕೆ ನೋಂದಣಿಯನ್ನು ನಿರಾಕರಿಸಲಾಗಿದೆ.. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿದಂತೆ ಲಸಿಕೆ ತರಿಸದೆಯೇ ಅಬ್ಬರದ ಪ್ರಚಾರ ಮಾಡಿದ ಸರ್ಕಾರ ಈಗ ನಾಡಿದ ಜನತೆಗೆ ದ್ರೋಹ ಎಸಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಸಾಮರ್ಥ್ಯದ ಪ್ರತೀಕವಿದು ಎಂದು ಕಿಡಿಕಾರಿದೆ.