ಬೆಂಗಳೂರು: ರಾಹುಲ್ ಗಾಂಧಿ ಮುಂದೆ ಮಾಡಿದ ಎಲ್ಲಾ ನಾಟಕಗಳ ಮುಖವಾಡ ಕಳಚಿದೆ. ರಾಹುಲ್ ಗಾಂಧಿ ನಿರ್ದೇಶನದಂತೆ ಎಲ್ಲರೆದುರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಆದರೆ, ಒಪ್ಪಿಕೊಂಡಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಅಸಹನೆಗೆ ಬೆಂಕಿ ಬಿದ್ದಿದೆ, ನಿಜ ಬಣ್ಣ ಬಯಲಾಗುತ್ತಿದೆ. ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಹೊರಗಿಡಲಾಗುತ್ತಿದೆಯೇ? ಅಥವಾ ಪಕ್ಷದಿಂದಲೇ ನಡೆಯುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅತಿಥಿಯೇ? ಎಂದು ಪ್ರಶ್ನಿಸಿದೆ.
ರಾಹುಲ್ ಕಾಲದಲ್ಲಿ ಡಿಕೆಶಿ-ಸಿದ್ದರಾಮಯ್ಯ ಜೋಡಿ ಕೈ ಹಿಡಿದುಕೊಳ್ಳುವುದೇನು, ತಬ್ಬಿಕೊಳ್ಳುವುದೇನು! ರಾಹು ಕಾಲದಲ್ಲಿ ಅಧಿಕಾರಕ್ಕಾಗಿ ಬರೇ ಕಿತ್ತಾಟ! ಎಂದು ಬಿಜೆಪಿ ಟ್ಟಿಟ್ಟರ್ ನಲ್ಲಿ ಟೀಕಿಸಿದೆ.
Advertisement