ರಾಜ್ಯದ ಮುಂದಿನ ಸಿಎಂ ಎಂಬ ಬರಹವಿದ್ದ 75 ಕೆಜಿ ಕೇಕ್ ಕತ್ತರಿಸಿದ ಸಿದ್ದರಾಮಯ್ಯ!

ಕನಕಪೀಠದ ಶಿವಾನಂದಪುರಿ ಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ ಬೆನ್ನಲ್ಲೇ ಇದೀಗ ಬೆಂಬಲಿಗರು ಮುಂದಿನ ಸಿಎಂ ಎಂಬ ಬರಹವಿದ್ದ 75 ತೂಕದ ಕೇಕ್ ನ್ನು ಸಿದ್ದರಾಮಯ್ಯ ಅವರಿಂದ ಕತ್ತರಿಸಿಸಿದ್ದಾರೆ.
ಖಡ್ಗ ಹಿಡಿದಿರುವ ಸಿದ್ದರಾಮಯ್ಯ
ಖಡ್ಗ ಹಿಡಿದಿರುವ ಸಿದ್ದರಾಮಯ್ಯ

ಮೈಸೂರು: ಕನಕಪೀಠದ ಶಿವಾನಂದಪುರಿ ಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ ಬೆನ್ನಲ್ಲೇ ಇದೀಗ ಬೆಂಬಲಿಗರು ಮುಂದಿನ ಸಿಎಂ ಎಂಬ ಬರಹವಿದ್ದ 75 ತೂಕದ ಕೇಕ್ ನ್ನು ಸಿದ್ದರಾಮಯ್ಯ ಅವರಿಂದ ಕತ್ತರಿಸಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಕನಕ ಜಯಂತಿ ಹಾಗೂ ಕುರುಬರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಕಾರ್ಯಕ್ರಮದುದ್ದಕ್ಕೂ, ಸಿದ್ದರಾಮಯ್ಯ ಅವರನ್ನು 'ಮುಂದಿನ ಸಿಎಂ' ಎಂದು ಕರೆಯಲಾಯಿತು ಮತ್ತು ಈ ಸಂದರ್ಭದಲ್ಲಿ ಖಡ್ಗವನ್ನೂ ಕೂಡ ಸಿದ್ದರಾಮಯ್ಯ ಅವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಬಿಜೆಪಿ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯನ್ನು ಉತ್ತೇಜಿಸಿದ್ದಾರೆ. ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಲು ಎಲ್ಲಾ ಹಿಂದುಳಿದ ಸಮುದಾಯಗಳು ಒಂದಾಗಬೇಕು ಎಂದು ಅವರು ಒತ್ತಾಯಿಸಿದರು.

“ಕನಕದಾಸರು ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರಿಗೆ ವ್ಯಾಸ ಋಷಿಗಳು ವಿದ್ಯೆ ಕಲಿಸಲಿಲ್ಲ. ಕನಕದಾಸರು ತಮ್ಮ ಜ್ಞಾನದ ಮೂಲಕ ನಳಚರಿತ್ರೆ, ಮೋಹತರಂಗಿಣಿ ಹಾಗೂ ಕೀರ್ತನೆಗಳ ಮೂಲಕ ಜನರಲ್ಲಿ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸಿದರು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಸಿಎಂ ಆಗಲು ಸಾಧ್ಯವಾಯಿತು ಎಂದು ಇದೇ ವೇಳೆ ಸಿದ್ದರಾಮಯ್ಯ ಪುನರುಚ್ಚರಿಸಿದರು.

"ನಾವು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಇದು ಸುಸಮಯವಾಗಿದೆ", ಆರ್ಎಸ್ಎಸ್ ಸ್ವಾತಂತ್ರ್ಯ ಚಳುವಳಿಗೆ ಏನನ್ನೂ ನೀಡಿಲ್ಲ. ಆರ್‌ಎಸ್‌ಎಸ್ ತನ್ನ ಪ್ರಚಾರದ ಮೂಲಕ ಸಮಾಜ ಮತ್ತು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ಸಂವಿಧಾನವನ್ನು ಕಾಪಾಡುವ ಅಗತ್ಯವಿದ್ದು, ಸಿದ್ದರಾಮಯ್ಯ ಅವರಿಗೆ ಮುಂದಿನ ಸಿಎಂ ಆಗುವ ಎಲ್ಲಾ ಅವಕಾಶಗಳಿದೆ. ಅವರು ಮುಖ್ಯಮಂತ್ರಿಗಳಾದ ಮೇಲೆ ಸಂತ ಸಾಹಿತ್ಯಕ್ಕೆ ಹೊಸ ಜೀವ ತುಂಬುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com