ಉಡುಪಿ: ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಪಕ್ಷದಿಂದ ಮುನಿಸುಕೊಂಡ ನಾಯಕರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದರೆ, ಟಿಕೆಟ್ ಕೈ ತಪ್ಪಿದ ಹೊರತಾಗಿಯೂ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಅವರು, ಪಕ್ಷದ ಅಭ್ಯರ್ಥಿಯ ಬೆನ್ನಿಗೆ ನಿಂತಿದ್ದಾರೆ.
ಹೌದು.. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಣೆಯಿಂದ ತೀವ್ರವಾಗಿ ನೊಂದಿರುವ ಉಡುಪಿ ಶಾಸಕ ರಘುಪತಿ ಭಟ್ ಅವರು ಗುರುವಾರ ಈ ಸ್ಥಾನಕ್ಕೆ ಅಧಿಕೃತ ನಾಮನಿರ್ದೇಶಿತ ಯಶ್ಪಾಲ್ ಸುವರ್ಣ ಅವರನ್ನು ಬೆಂಬಲಿಸಿದ್ದಾರೆ. ಇದು ಪ್ರಸ್ತುತ ನಾಯಕ ಬಂಡಾಯದ ಬೇಗುದಿಯಲ್ಲಿ ಬೇಯುತ್ತಿರುವ ಬಿಜೆಪಿ ಪಕ್ಷಕ್ಕೆ ಅಲ್ಪ ಪ್ರಮಾಣದ ಸಮಾಧಾನ ತಂದಿದೆ.
ಉಡುಪಿಯಲ್ಲಿ ಸುವರ್ಣ ಅವರ ಪಕ್ಕದಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸಿದ ರಘುಪತಿ ಭಟ್ ಅವರು, ‘ಚುನಾವಣೆಯಲ್ಲಿ ಗೆಲ್ಲುವವರೆಗೆ’ ಹೊಸ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ಘೋಷಿಸಿದ್ದಾರೆ.
‘ಚುನಾವಣೆವರೆಗೂ ನಾನು ಪ್ರತಿ ಹಂತದಲ್ಲೂ ಯಶಪಾಲ್ ಸುವರ್ಣರ ಒಡನಾಟದಲ್ಲಿರುತ್ತೇನೆ, ತಮ್ಮ ಹಿತೈಷಿಗಳು ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಅಧಿಕೃತ ಅಭ್ಯರ್ಥಿಯ ಬೆನ್ನಿಗೆ ರ್ಯಾಲಿ ಮಾಡುತ್ತಾರೆ. ಪಕ್ಷದ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಬೇಸರಗೊಂಡು ಬುಧವಾರ ಕೆಲವು ಮಾತುಗಳನ್ನು ಮಾತನಾಡಿದ್ದೇನೆ. ನಮ್ಮ ಪೋಷಕರು ನಮ್ಮನ್ನು ಗದರಿಸಿದಾಗ ನಮಗೆ ದುಃಖವಾಗುತ್ತದೆ ಮತ್ತು ನಾವು ಅವರನ್ನು ಮತ್ತೆ ಗದರಿಸುತ್ತೇವೆ. ನಾವು ನಂತರ ಅವರ ಬಳಿಯಲ್ಲೇ ಮಲಗುತ್ತೇವೆ. ಇದೂ ಕೂಡ ಹಾಗೆಯೇ" ಎಂದು ಅವರು ಹೇಳಿದರು.
ಇದನ್ನೂ ಓದಿ: ಮಾಜಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಜೆಡಿಎಸ್ ಸೇರ್ಪಡೆ
ತಮ್ಮ ಹಿತೈಷಿಗಳೂ ಬಿಜೆಪಿಯ ಹಿತೈಷಿಗಳು ಎಂದು ಹೇಳಿದ ಭಟ್, ಸಾಮಾಜಿಕ ಜಾಲತಾಣಗಳಲ್ಲಿ ಉಮೇದುವಾರಿಕೆ ಕುರಿತು ಚರ್ಚೆಗಳನ್ನು ನಿಲ್ಲಿಸುವಂತೆ ತಮ್ಮ ಹಿಂಬಾಲಕರಿಗೆ ಮನವಿ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ತಮಗೆ ಕರೆ ಮಾಡಿ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ ಎಂದರು. ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲು ಏನೂ ಇಲ್ಲ ಎಂದು ರಘುಪತಿ ಭಟ್ ಹೇಳಿದರು.
Advertisement