ಮೂಢನಂಬಿಕೆಗೆ ಸೆಡ್ಡು: ಸೂರ್ಯಗ್ರಹಣದಂದು ಆರ್‌ಟಿಐ ಕಾರ್ಯಕರ್ತ ಟಿ. ನರಸಿಂಹ ಮೂರ್ತಿ ನಾಮಪತ್ರ ಸಲ್ಲಿಕೆ!

ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಏಪ್ರಿಲ್ 20 ರಂದು ಸೂರ್ಯಗ್ರಹಣದ ವೇಳೆ ನಾಮಪತ್ರ ಸಲ್ಲಿಸುವುದಾಗಿ ವಿಚಾರವಾದಿ ಹಾಗೂ ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ತಿಳಿಸಿದ್ದಾರೆ.
ಟಿ. ನರಸಿಂಹ ಮೂರ್ತಿ
ಟಿ. ನರಸಿಂಹ ಮೂರ್ತಿ
Updated on

ಬೆಂಗಳೂರು: ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಏಪ್ರಿಲ್ 20 ರಂದು ಸೂರ್ಯಗ್ರಹಣದ ವೇಳೆ ನಾಮಪತ್ರ ಸಲ್ಲಿಸುವುದಾಗಿ ವಿಚಾರವಾದಿ ಹಾಗೂ ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಏಪ್ರಿಲ್ 20ರಂದು ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಬರಲಿದ್ದು, ಹಲವು ಅಭ್ಯರ್ಥಿಗಳಿಗೆ ಅಶುಭ ದಿನವಾಗಿದ್ದರೂ ತಪ್ಪು ಕಲ್ಪನೆ ಹೋಗಲಾಡಿಸಲು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಏಪ್ರಿಲ್ 20 ರ ಮೊದಲು ನಾಮಪತ್ರ ಸಲ್ಲಿಸಿದ ಇತರ ಅಭ್ಯರ್ಥಿಗಳು ಗೆಲ್ಲುತ್ತಾರೆಯೇ ಎಂದು ನಾನು ನೋಡಬೇಕು. ಒಬ್ಬರೇ ಗೆಲ್ಲುತ್ತಾರೆ, ಆದ್ದರಿಂದ ಆ ದಿನವನ್ನು ತಪ್ಪಿಸುವುದರಿಂದ ಅವರಿಗೆ ಸಹಾಯ ಮಾಡುವುದಿಲ್ಲ. ನಾವು ತರ್ಕಬದ್ಧವಾಗಿ ಯೋಚಿಸಬೇಕು" ಎಂದು ಮೂರ್ತಿ ಹೇಳಿದರು.

ಟೌನ್‌ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೇವು, ಆದರೆ ಮಾದರಿ ನೀತಿ ಸಂಹಿತೆಯಿಂದಾಗಿ ಅನುಮತಿ ಸಿಗಲಿಲ್ಲ ಎಂದು ತೊಂದರೆಯಾಗಿದೆ ಎಂದು ಮೂರ್ತಿ ತಿಳಿಸಿದರು. ಅಂಧಶ್ರದ್ಧೆ ವಿರುದ್ಧ ಪ್ರತಿಭಟನೆ ನಡೆಸುವ ಬದಲು ನಾಲ್ವರೊಂದಿಗೆ ಚುನಾವಣಾಧಿಕಾರಿ ಕ್ವೀನ್ಸ್‌ ರಸ್ತೆಯ ಅಧಿಕಾರಿ ಬಳಿ ತೆರಳಿ ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com