ಲಂಚಕ್ಕಾಗಿ ಕಿರುಕುಳ ಆರೋಪ: ಇದು ನಕಲಿ ಪತ್ರ ಎಂದ ಸಚಿವ ಚೆಲುವರಾಯಸ್ವಾಮಿ

ನನ್ನ ವಿರುದ್ಧ ರಾಜ್ಯಪಾಲರಿ ದೂರು ನೀಡಿರುವ ಪತ್ರದ ಕುರಿತು ನನಗೆ ತಿಳಿದಿಲ್ಲ, ಪತ್ರವನ್ನು ಯಾರೂ ಬರೆದಿದ್ದಾರೆಂಬುದೂ ಗೊತ್ತಿಲ್ಲ. ಆದರೆ, ಜಂಟಿ ನಿರ್ದೇಶಕರು ನಕಲಿ ಪತ್ರ ಎಂದು ಹೇಳಿದ್ದಾರೆಂದು ಸಚಿವ ಚೆಲುವರಾಯಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ಸಚಿವ ಚೆಲುವರಾಯಸ್ವಾಮಿ
ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು: ನನ್ನ ವಿರುದ್ಧ ರಾಜ್ಯಪಾಲರಿ ದೂರು ನೀಡಿರುವ ಪತ್ರದ ಕುರಿತು ನನಗೆ ತಿಳಿದಿಲ್ಲ, ಪತ್ರವನ್ನು ಯಾರೂ ಬರೆದಿದ್ದಾರೆಂಬುದೂ ಗೊತ್ತಿಲ್ಲ. ಆದರೆ, ಜಂಟಿ ನಿರ್ದೇಶಕರು ನಕಲಿ ಪತ್ರ ಎಂದು ಹೇಳಿದ್ದಾರೆಂದು ಸಚಿವ ಚೆಲುವರಾಯಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ವಿರುದ್ಧ ರಾಜ್ಯಪಾಲರಿ ದೂರು ನೀಡಿರುವ ಪತ್ರದ ಕುರಿತು ನನಗೆ ತಿಳಿದಿಲ್ಲ, ಪತ್ರವನ್ನು ಯಾರೂ ಬರೆದಿದ್ದಾರೆಂಬುದೂ ಗೊತ್ತಿಲ್ಲ. ಆದರೆ, ಜಂಟಿ ನಿರ್ದೇಶಕರು ನಕಲಿ ಪತ್ರ ಎಂದು ಹೇಳಿದ್ದಾರೆ. ಪಾಪಾ, ಬಹಳ ಹುಡುಕಿ ಹುಡುಕಿ ಕೆಲವರು ಏನೇನೋ ಮಾಡುತ್ತಿದ್ದಾರೆ ಮಾಡಲಿ. ಈ ಬಗ್ಗೆ ತನಿಖೆ ನಡೆಸುವಂತೆ ಕೃಷಿ ಕಾರ್ಯದರ್ಶಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಕೆಲವರು ಬೇರೇನೋ ಮಾಡುತ್ತಿದ್ದಾರೆ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ನಾವು ಚುನಾವಣೆಯಲ್ಲಿ ಏಳು ಸ್ಥಾನಗಳ ಪೈಕಿ 6ರಲ್ಲಿ ಗೆದ್ದಿದ್ದೇವೆ. ಇದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಲಂಚದ ಆರೋಪದ ಬಗ್ಗೆ ತನಿಖೆ ಬೇಕಾದರೆ ಮಾಡಿಸೋಣ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com