ನಳಿನ್ ಕುಮಾರ್ ಕಟೀಲ್, ಬೊಮ್ಮಾಯಿಯಿಂದ ಅಲ್ಪಸಂಖ್ಯಾತರ ನಿರ್ಲಕ್ಷ್ಯ: 4 ವರ್ಷಗಳ ನಂತರ ಓಲೈಕೆಗೆ ಬಿಜೆಪಿ ಮುಂದು!

ನಾಲ್ಕ ವರ್ಷಗಳ ನಂತರ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಆರ್ಚ್‌ಬಿಷಪ್ ಪೀಟರ್ ಮಚಾದೋ ಅವರನ್ನು ಭಾನುವಾರ ಭೇಟಿ ಮಾಡಿ ಕ್ರಿಸ್‌ಮಸ್ ಶುಭಾಶಯ ಕೋರಿ ಸೌಜನ್ಯ ತೋರಿದ್ದಾರೆ.
ಆರ್ಚ್‌ಬಿಷಪ್ ಪೀಟರ್ ಮಚಾದೋ ಭೇಟಿ ಮಾಡಿದ ವಿಜಯೇಂದ್ರ
ಆರ್ಚ್‌ಬಿಷಪ್ ಪೀಟರ್ ಮಚಾದೋ ಭೇಟಿ ಮಾಡಿದ ವಿಜಯೇಂದ್ರ

ಬೆಂಗಳೂರು:  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬೆಂಗಳೂರಿನ ಕ್ರೈಸ್ತ ಮಹಾ ಧರ್ಮಾಧ್ಯಕ್ಷರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.

ನಾಲ್ಕ ವರ್ಷಗಳ ನಂತರ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಅವರು ಆರ್ಚ್‌ಬಿಷಪ್ ಪೀಟರ್ ಮಚಾದೋ ಅವರನ್ನು ಭಾನುವಾರ ಭೇಟಿ ಮಾಡಿ ಕ್ರಿಸ್‌ಮಸ್ ಶುಭಾಶಯ ಕೋರಿ ಸೌಜನ್ಯ ತೋರಿದ್ದಾರೆ. ಈಗ ಲೋಕಸಭೆ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗ ಅಲ್ಪಸಂಖ್ಯಾತರ ಜೊತೆಗೆ ಭಾಂದವ್ಯ  ಸರಿಪಡಿಸಲು ಬಯಸಿದೆ ಏಕೆಂದರೆ ಪಕ್ಷಕ್ಕೆ ಪ್ರತಿ ಮತವೂ ಮುಖ್ಯವಾಗಿದೆ.

ರಾಜ್ಯ ಪಕ್ಷದ ಅಧ್ಯಕ್ಷರಾಗಿ ಮತ್ತು ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರು "ಶೂನ್ಯ ಧಾರ್ಮಿಕ ತಾರತಮ್ಯ" ಖ್ಯಾತಿ ಹೊಂದಿದ್ದರು ಮತ್ತು ಆರ್ಚ್ ಬಿಷಪ್ ಮತ್ತು ಇತರ ಅಲ್ಪಸಂಖ್ಯಾತ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದರು.

ಆದರೆ ಹಿಂದಿನ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಥವಾ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಭೇಟಿ ಮಾಡಲಿಲ್ಲ, ಅಲ್ಪಸಂಖ್ಯಾತರು ತಮಗೆ  ಸಂಬಂಧಿಸಿದವರಲ್ಲ ಎಂದು ಅಭಿಪ್ರಾಯ ಹೊಂದಿದ್ದರು.

ಆದರೆ ಸೋಮವಾರದ ಭೇಟಿಯು ಬದಲಾವಣೆಯ ಮುನ್ನುಡಿಯಾಗಿರಬಹುದು ಮತ್ತು ಪಕ್ಷವು ಪ್ರತ್ಯೇಕತೆಯಿಂದ ಎಲ್ಲರನ್ನೂ ಒಳಗೊಂಡಂತೆ ರೂಪಾಂತರಗೊಳ್ಳುವ ಸೂಚನೆಯನ್ನು ನೀಡುತ್ತದೆ ಎಂದು ರಾಜಕೀಯ ವೀಕ್ಷಕರು  ಅಭಿಪ್ರಾಯ ಪಟ್ಟಿದ್ದಾರೆ.

ನಾವು ವಿವಿಧ ಧರ್ಮಗಳನ್ನು ಅನುಸರಿಸಬಹುದು, ಆದರೆ ನಾವು ಅವುಗಳನ್ನು ಮೀರಿ ಮೇಲೇರಬೇಕು, ನಮ್ಮ ಪೂರ್ವಾಗ್ರಹಗಳನ್ನು ಬದಿಗಿಡಬೇಕು. ನಿಮ್ಮ ತಂದೆ ಬಿಎಸ್ ಯಡಿಯೂರಪ್ಪ ಅವರು ಸಜ್ಜನರು ಮತ್ತು ಎಲ್ಲಾ ಧರ್ಮಗಳನ್ನು ಸ್ವೀಕರಿಸುತ್ತಿದ್ದರು. ಪ್ರಮುಖ ಸಂದರ್ಭಗಳಲ್ಲಿ ನಮ್ಮನ್ನು ಭೇಟಿ ಮಾಡಿದ್ದರು. ಆದರೆ ಅವನ ನಂತರ ಬಂದವರು ಹಾಗೆ ಮಾಡಲಿಲ್ಲ ಎಂದು ಆರ್ಚ್‌ಬಿಷಪ್ ಮಚಾಡೊ ವಿಜಯೇಂದ್ರ ಅವರಿಗೆ ಹೇಳಿದ್ದಾರೆ.

ಸೆಪ್ಟಂಬರ್‌ನಲ್ಲಿ ನಡೆದ ಮೇರಿ ಮಾತೆಯ ಹಬ್ಬಕ್ಕೆ ಅಂದಿನ ಸಿಎಂ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದನ್ನು ಅಲ್ಪಸಂಖ್ಯಾತ ಮುಖಂಡರೊಬ್ಬರು ನೆನಪಿಸಿಕೊಂಡರು, ಆದರೆ ಅವರು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಗೈರಾದರು.

ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ರಶ್ಮಿ ಡಿಸೋಜಾ ಮಾತನಾಡಿ, ಬಿಜೆಪಿ ಅವಕಾಶಗಳ ಪಕ್ಷ. ನಾನು ಸುಮಾರು 20 ವರ್ಷಗಳಿಂದ ಪಕ್ಷದಲ್ಲಿದ್ದು, ಬೂತ್ ಮಟ್ಟದ ಕಾರ್ಯಕರ್ತೆಯಾಗಿ ರಾಷ್ಟ್ರಮಟ್ಟಕ್ಕೆ ಬೆಳೆದಿದ್ದೇನೆ. ಅಲ್ಪಸಂಖ್ಯಾತರು ತಮ್ಮಲ್ಲಿರುವ ಅನುಮಾನಗಳನ್ನು ಹೊರಹಾಕಿ ಇತರ ಪಕ್ಷಗಳನ್ನು ಬೆಂಬಲಿಸುವಂತೆ ಬಿಜೆಪಿಯನ್ನು ಬೆಂಬಲಿಸುವ ಸಮಯ ಬಂದಿದೆ. ಹೆಚ್ಚು ಅಲ್ಪಸಂಖ್ಯಾತರು ಎಂದರೆ ಪಕ್ಷಕ್ಕೆ  ಹೆಚ್ಚಿನ ಶಕ್ತಿ ಎಂದು ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ, ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಮತ್ತು ಮಾಜಿ ಎಂಎಲ್‌ಸಿ ಅಬ್ದುಲ್ ಅಜೀಂ ಮಾತನಾಡಿ, ಅಲ್ಪಸಂಖ್ಯಾತರು ಮತ್ತು ಬಿಜೆಪಿ ನಡುವೆ ಅಂತರವಿತ್ತು. ಈ ಕಂದಕಕ್ಕೆ ಇಬ್ಬರೂ ಒಂದು ರೀತಿಯಲ್ಲಿ ಕಾರಣರಾಗಿದ್ದರು. ಈಗ ಪಕ್ಷವು ಎಲ್ಲರನ್ನೂ ಒಳಗೊಂಡಂತೆ ಸಾಗುತ್ತಿದೆ. ಆದರೆ ಅಲ್ಪಸಂಖ್ಯಾತರು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಳ ಅಗತ್ಯವಿದೆ ಎಂದು ಅನೇಕ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖ್ಯಸ್ಥ ಡಾ. ಅನಿಲ್ ಥಾಮಸ್ ಮಾತನಾಡಿ, ಮೋದಿಜಿ ಅವರೇ ಮುನ್ನಡೆಸುತ್ತಿದ್ದಾರೆ. ಇಂದು ಮತ್ತೊಮ್ಮೆ ಪ್ರಧಾನಿ ಮೋದಿಯವರು ಚರ್ಚ್‌ಗಳಿಗೆ ಭೇಟಿ ನೀಡಿದ್ದು, ಕರ್ನಾಟಕ ರಾಜ್ಯ ಘಟಕವೂ ಈ ಕ್ರಮವನ್ನು ಅನುಸರಿಸಿ ಅಲ್ಪಸಂಖ್ಯಾತರನ್ನು ತಲುಪುತ್ತಿದೆ. ಇದು ಅಕ್ಷರಶಃ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com