ಬೆಂಗಳೂರು: ಎಲ್ಲಾದರೂ ಇರು ಹೇಗಾದರೂ ಇರು ಚುನಾವಣೆ ಬಂದಾಗ ಮಾತ್ರ ಕರ್ನಾಟಕದಲ್ಲೇ ಇರು ಎಂಬ ನೀತಿ ಪಾಲಿಸುತ್ತಿರುವ ಪ್ರಧಾನಿ ಮೋದಿಯವರೇ ನನ್ನ 6 ಪ್ರಶ್ನೆಗಳಿಗೆ ಉತ್ತರಿಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಎಲ್ಲಾದರೂ ಇರು ಹೇಗಾದರೂ ಇರು ಚುನಾವಣೆ ಬಂದಾಗ ಮಾತ್ರ ಕರ್ನಾಟಕದಲ್ಲೇ ಇರು" ಎಂಬ ನೀತಿ ಪಾಲಿಸುತ್ತಿರುವ ಮೋದಿಯವರಿಗೆ ಅವರಿಗೆ 6 ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ. ಸಂಸತ್ತಿನಲ್ಲಿ ಮತ್ತು ಮಾದ್ಯಮಗಳೆದುರು ಉತ್ತರದಾಯಿತ್ವದಿಂದ ಜಾರಿಕೊಳ್ಳುವ ಜಾಣ್ಮೆ ತೋರಿಸುವ ಮೋದಿಯವರು ಈಗಲಾದರೂ ನಾವು ಮುಂದಿಡುತ್ತಿರುವ ಜನರ ಪ್ರಶ್ನೆಗೆ ಉತ್ತರಿಸಲಿ ಎಂದು ಹೇಳಿದ್ದಾರೆ.
ಸುರ್ಜೇವಾಲಾ ಅವರು ಕೇಳಿರುವ ಪ್ರಶ್ನೆಗಳು ಇಂತಿವೆ...
Advertisement