ಬೆಂಗಳೂರು: ರಾಜ್ಯ ಬಿಜೆಪಿಯ ಪ್ರತಿಪಕ್ಷ ನಾಯಕ ಹಾಗೂ ಪಕ್ಷದ ಅಧ್ಯಕ್ಷರ ನೇಮಕ ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಮತ್ತು ಅದರ ಮೌಲ್ಯಗಳನ್ನು ಟೀಕಿಸುವ ಬುದ್ಧಿಜೀವಿಗಳ ಬಗ್ಗೆ ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಅವರು, ಮೆಕಾಲೆ ಮತ್ತು ಮಾರ್ಕ್ಸ್ ಆರಂಭಿಸಿದ ತರಬೇತಿ ಕೇಂದ್ರಗಳಲ್ಲಿ ಕಲಿತವರು ಬಿಜೆಪಿಯನ್ನು ಟೀಕಿಸುತ್ತಿದ್ದಾರೆ. ಇತಿಹಾಸ ಪುಸ್ತಕಗಳು ಅಕ್ಬರನನ್ನು ಶ್ರೇಷ್ಠ ಎಂದು ಉಲ್ಲೇಖಿಸಿದರೆ ಅಶೋಕ ಮತ್ತು ರಾಜರಾಜ ಚೋಳನನ್ನು ಶ್ರೇಷ್ಠ ಎಂದು ಪರಿಗಣಿಸುವುದಿಲ್ಲ ಎಂದರು.
ಪುಸ್ತಕಗಳಲ್ಲಿ, ಇತಿಹಾಸಗಳಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಸಿ ಟಿ ರವಿ, ದೇಶವನ್ನು ಲೂಟಿ ಮಾಡಿದವರು, ದಾಳಿಕೋರರು, ನಮ್ಮ ಸಂಸ್ಕೃತಿಯನ್ನು ಹಾಳು ಮಾಡಿದವರು, ಹಾಳು ಮಾಡಲು ಯತ್ನಿಸಿದವರು ನಮ್ಮ ದೇಶಕ್ಕೆ ಮಾಡಿದ ಅವಮಾನವಾಗಿದೆ.
ನಮ್ಮ ಭಾರತ ಮಾತೆಗೆ ಅವಮಾನ ಮಾಡಿದವರನ್ನು ನಾವು ದೇಶದಲ್ಲಿ ಶ್ರೇಷ್ಠರು ಎಂದು ಕರೆಯುವ ಪರಿಸ್ಥಿತಿಯಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Advertisement