ಪಶ್ಚಾತಾಪ ಸತ್ಯಾಗ್ರಹದಲ್ಲಿ ಎಚ್.ವಿಶ್ವನಾಥ್ ಮತ್ತಿತರರು
ಪಶ್ಚಾತಾಪ ಸತ್ಯಾಗ್ರಹದಲ್ಲಿ ಎಚ್.ವಿಶ್ವನಾಥ್ ಮತ್ತಿತರರು

ಮೈಸೂರು: ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದಕ್ಕೆ ಎಚ್.ವಿಶ್ವನಾಥ್ 'ಪಶ್ಚಾತಾಪ ಸತ್ಯಾಗ್ರಹ'

ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರಕಾರ ಬರಲು ಕಾರಣವಾದ ಎಚ್.ವಿಶ್ವನಾಥ್‌ ಸೋಮವಾರ ಪಶ್ಚಾತಾಪ ಸತ್ಯಾಗ್ರಹ ‌ನಡೆಸಿದರು.
Published on

ಮೈಸೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರಕಾರ ಬರಲು ಕಾರಣವಾದ ಎಚ್.ವಿಶ್ವನಾಥ್‌ ಸೋಮವಾರ ಪಶ್ಚಾತಾಪ ಸತ್ಯಾಗ್ರಹ ‌ನಡೆಸಿದರು.

ಇಲ್ಲಿನ ನ್ಯಾಯಾಲಯದ ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರಿಸಿಕೊಂಡು ಕೆಲಕಾಲ ಸಾಂಕೇತಿಕವಾಗಿ ಪಶ್ಚಾತ್ತಾಪ ಸತ್ಯಾಗ್ರಹ  ನಡೆಸಿದ ಎಚ್.ವಿಶ್ವನಾಥ್, ಬಳಿಕ ರಸ್ತೆ ಬದಿಯಲ್ಲಿ ಹಾಕಿದ್ಧ ಪೆಂಡಾಲ್‌ನೊಳಗೆ ಕುಳಿತು ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿದರು. ಪ್ರಗತಿಪರ ಚಿಂತಕರಾದ ಕೆ.ಎಸ್.ಭಗವಾನ್, ಬಸವಲಿಂಗಯ್ಯ ಸೇರಿದಂತೆ ಹಲವು ಪ್ರಮುಖರು ವಿಶ್ವನಾಥ್ ಅವರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಬಿಜೆಪಿಯಂತಹ ಭ್ರಷ್ಟ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಅತೀವ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಂದಾಣಿಕೆ ಇಲ್ಲದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಅನಿವಾರ್ಯವಾಗಿ  ಬಿಜೆಪಿ ಸೇರಬೇಕಾಯಿತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ಧುದರಿಂದ, ರಾಜ್ಯದಲ್ಲೂ ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳಿತಾಗಲಿದೆಯೆಂದು ಸಮಾನ ಮನಸ್ಕರೊಡನೆ ಸೇರಿ ಚರ್ಚಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುವ ಕನಸು ಕಂಡಿದ್ದೆ. ಆದರೆ, ಅದೆಲ್ಲವೂ ನುಚ್ಚುನೂರಾದವು' ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸದ್ಯದಲ್ಲೇ ಇದೇ ಮಾತು ಬಿಜೆಪಿಗೆ ಹೋಗಿರುವ ಬಹುತೇಕ ವಲಸಿಗರ ಬಾಯಲ್ಲೂ ಬರಲಿದೆ. ಹಕ್ಕಿಗಳು ಮೊಟ್ಟೆ ಇಟ್ಟು ಮರಿ ಮಾಡಲು ಬೇರೆ ಪ್ರದೇಶಕ್ಕೆ ವಲಸೆ ಹೋಗುತ್ತವೆ, ಆದರೆ ಎಂದಿಗೂ ವಲಸೆಯ ಪ್ರದೇಶಕ್ಕೆ ಹೊಂದಿಕೊಂಡು ಅಲ್ಲೇ ಬದುಕಲಾರವು ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com