ವಿಧಾನಸಭೆ ಚುನಾವಣೆ: ಕೆಜಿಎಫ್ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಕೆಜಿಎಫ್ ಕ್ಷೇತ್ರದ ಟಿಕೆಟ್ ವಿಚಾರವಾಗಿ ಭಾನುವಾರ ನಡೆದ ಸಭೆಯಲ್ಲಿ ಕೆಜಿಎಫ್ ಬಿಜೆಪಿ ಪಾಳೇಯದಲ್ಲಿ ಬಿರುಕು ಮುಂದುವರಿದಿದೆ. ಟಿಕೆಟ್ ರೇಸ್‌ಗೆ ವೇಲು ನಾಯ್ಕ ಎಂಟ್ರಿ ಕೊಡುವುದರೊಂದಿಗೆ ಭಿನ್ನಮತ ಭುಗಿಲೆದ್ದಿದೆ.
ವೈ ಸಂಪಂಗಿ
ವೈ ಸಂಪಂಗಿ
Updated on

ಕೋಲಾರ: ಕೆಜಿಎಫ್ ಕ್ಷೇತ್ರದ ಟಿಕೆಟ್ ವಿಚಾರವಾಗಿ ಭಾನುವಾರ ನಡೆದ ಸಭೆಯಲ್ಲಿ ಕೆಜಿಎಫ್ ಬಿಜೆಪಿ ಪಾಳೇಯದಲ್ಲಿ ಬಿರುಕು ಮುಂದುವರಿದಿದೆ. ಟಿಕೆಟ್ ರೇಸ್‌ಗೆ ವೇಲು ನಾಯ್ಕ ಎಂಟ್ರಿ ಕೊಡುವುದರೊಂದಿಗೆ ಭಿನ್ನಮತ ಭುಗಿಲೆದ್ದಿದೆ.

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕ ಕಳೆದ ಒಂದು ವಾರದಿಂದ ಸ್ಥಳೀಯ ಮುಖಂಡರನ್ನು ಭೇಟಿಯಾಗಿ ಆಶೀರ್ವಾದ ಮಾಡುವಂತೆ  ಮನವಿ ಮಾಡುತ್ತಿದ್ದಾರೆ. ಇದೇ ವೇಳೆ ಅವರು ಕೆಜಿಎಫ್‌ನಲ್ಲಿ ರ್ಯಾಲಿ ಸಹ ಆಯೋಜಿಸಿದರು, ಇದರಲ್ಲಿ ಜಿಲ್ಲಾ ಸಚಿವ ಮುನಿರತ್ನ ಭಾಗವಹಿಸಿದ್ದರು.

ಮಾಜಿ ಶಾಸಕ ವೈ.ಸಂಪಂಗಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಅವರ ಪುತ್ರಿ ಅಶ್ವಿನಿ ಸಂಪಂಗಿ, ಮೋಹನ್ ಕೃಷ್ಣ, ಸುರೇಶ್ ನಾರಾಯಣ ಕುಟ್ಟಿ, ಸುರೇಶ್ ಮತ್ತು ಚಲಪತಿ ಕೂಡ ಕೇಸರಿ ಪಕ್ಷದ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

ಮುನಿರತ್ನ ಜೊತೆಗೆ ವೇಲು ನಾಯ್ಕರ ಹಠಾತ್ ಪ್ರವೇಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ನಡುವೆ ಮೋಹನ್‌ಕೃಷ್ಣ ಬೆಂಬಲಿಗರು ಕೆಜಿಎಫ್‌ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮೋಹನ್ ಅವರು ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದಾರೆ. 

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಪಂಗಿ ಬೆಂಬಲಿಗರು, ಕೆಜಿಎಫ್‌ನ ಜನರಿಗಾಗಿ ಕುಟುಂಬವು ಹಲವಾರು ವರ್ಷಗಳಿಂದ ದುಡಿಯುತ್ತಿರುವುದರಿಂದ ತಮ್ಮ ನಾಯಕ ಅಥವಾ ಅವರ ಮಗಳಿಗೆ ಪಕ್ಷದ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಕಾಂಗ್ರೆಸ್‌ನ ಹಿರಿಯ ನಾಯಕ ಕೆ ಎಚ್‌ ಮುನಿಯಪ್ಪ ಅವರ ಪುತ್ರಿ, ಹಾಲಿ ಶಾಸಕಿ ರೂಪಕಲಾ ಶಶಿಧರ್‌ ಅವರನ್ನು ಕೆಜಿಎಫ್‌ನಿಂದ ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್‌ ಈಗಾಗಲೇ ಘೋಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com