ಸಂಪುಟ ಬಿಕ್ಕಟ್ಟು: ಸಿದ್ದು ಆಪ್ತ ಮಹಾದೇವಪ್ಪಗೆ ಸ್ಥಾನ ನೀಡದಂತೆ ಡಿಕೆ ಪಟ್ಟು; ದಲಿತರು-ಒಕ್ಕಲಿಗರ ಸ್ವಾಭಿಮಾನಕ್ಕೆ ಪೆಟ್ಟು!
ಲಿಂಗಾಯತ ಮುಖಂಡ ಮತ್ತು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ಪರವಾಗಿ ವರುಣಾ ಮತ್ತು ಮೈಸೂರಿನಲ್ಲಿ ದಲಿತ ಸಮಾವೇಶಗಳನ್ನು ಆಯೋಜಿಸುವಲ್ಲಿ ಮಹದೇವಪ್ಪ ಪ್ರಮುಖ ಪಾತ್ರ ವಹಿಸಿದ್ದರು.
Published: 23rd May 2023 12:31 PM | Last Updated: 23rd May 2023 02:21 PM | A+A A-

ಮಹಾದೇವಪ್ಪ ಮತ್ತು ಚಲುವರಾಯಸ್ವಾಮಿ
ಮೈಸೂರು: ಮೊದಲ ಸಂಪುಟ ಸಚಿವ ಸಂಪುಟದಲ್ಲಿ ಮೈಸೂರು ಭಾಗದ ದಲಿತ ಸಮುದಾಯದ ಯಾವುದೇ ಹಿರಿಯ ಶಾಸಕರಿಗೆ ಸ್ಥಾನ ನೀಡದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ವಿವಿಧ ದಲಿತ ಸಂಘಟನೆಗಳ ಪ್ರತಿಭಟನೆಯ ಬಿಸಿ ಎದುರಿಸುತ್ತಿದ್ದಾರೆ. ಇದರ ಜೊತೆಗೆ ಹಳೇ ಮೈಸೂರು ಭಾಗದ ಯಾವುದೇ ಒಕ್ಕಲಿಗ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅಹಿಂದ ನಾಯಕರ ಸಿದ್ದು ಆಪ್ತ ಎಂದೇ ಗುರುತಿಸಿಕೊಂಡಿರುವ ಎಚ್ಸಿ ಮಹದೇವಪ್ಪ ಅವರಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಅವರ ಮನವೊಲಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಕೂಡ ಎಸ್ಸಿ (ಬಲ) ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಲ್ಲಿ ವಿಫಲವಾಗಿತ್ತು.
ಲಿಂಗಾಯತ ಮುಖಂಡ ಮತ್ತು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯನವರ ಪರವಾಗಿ ವರುಣಾ ಮತ್ತು ಮೈಸೂರಿನಲ್ಲಿ ದಲಿತ ಸಮಾವೇಶಗಳನ್ನು ಆಯೋಜಿಸುವಲ್ಲಿ ಮಹದೇವಪ್ಪ ಪ್ರಮುಖ ಪಾತ್ರ ವಹಿಸಿದ್ದರು . ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ದಲಿತ ಸಂಘಟನೆಗಳನ್ನು ಹುರಿದುಂಬಿಸಿದರು. ಪರಿಣಾಮವಾಗಿ, ಚದುರಿ ಹೋಗಿದ್ದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಪರವಾಗಿ ಚಲಾವಣೆಯಾಗಿದ್ದವು. ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಮತ ನೀಡಿದ ಕಾರಣ ಕಾಂಗ್ರೆಸ್ 21 ಸ್ಥಾನಗಳಲ್ಲಿ ಜಯಗಳಿಸಿತು ಮತ್ತು ರಾಜ್ಯದ ಎಲ್ಲಾ ಎಸ್ಟಿ ಸ್ಥಾನಗಳನ್ನು ಗೆದ್ದಿತು.
ಇದನ್ನೂ ಓದಿ: ಕಲಬುರಗಿಯಲ್ಲಿ ಗರಿಗೆದರಿದ ನಿರೀಕ್ಷೆ: ಕಿತ್ತೂರು ಕರ್ನಾಟಕ-ಕಲ್ಯಾಣ ಕರ್ನಾಟಕದ ಮೂರರಿಂದ ನಾಲ್ವರಿಗೆ ಸಂಪುಟ ಸ್ಥಾನ!
ಮೂರು ಬಾರಿ ಶಾಸಕರಾದ ನರೇಂದ್ರಸ್ವಾಮಿ ಮತ್ತು ಎಸ್ ಎನ್ ನಾರಾಯಣಸ್ವಾಮಿ ಮೈಸೂರು ಭಾಗದಿಂದ ಸ್ಪರ್ಧಿಸಿರುವ ಎಸ್ಸಿ (ಬಲ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಿಬ್ಬರು ಸೇರಿ ಸಮುದಾಯದ ಆರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಾಗುತ್ತಿದೆ.
ಮೈಸೂರು ಭಾಗದಿಂದ ಸಿದ್ದರಾಮಯ್ಯನವರ ಆಪ್ತ ಮಹದೇವಪ್ಪ, ಕೆ ವೆಂಕಟೇಶ್ ಮತ್ತು ಇತರ ಬೆಂಬಲಿಗರ ಸೇರ್ಪಡೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿ ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿರಿಯಾಪಟ್ಟಣದಿಂದ ಆರು ಬಾರಿ ಶಾಸಕರಾಗಿದ್ದ ಕೆ ವೆಂಕಟೇಶ್ ಮತ್ತು ಮಂಡ್ಯ ಜಿಲ್ಲೆಯ ಎನ್ ಚಲುವರಾಯಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದಕ್ಕಾಗಿ ಒಕ್ಕಲಿಗರು ಕೂಡ ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ, ಸಚಿವ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕುರಿತು ಪೈಪೋಟಿ; ಡಿಕೆಶಿ-ಸಿದ್ದು ಭೇಟಿಯಲ್ಲಿ ನಾಯಕರು ಬ್ಯುಸಿ
ಶಾಸಕ ವೆಂಕಟೇಶ್, ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಮಹದೇವಪ್ಪ ಮತ್ತು ಕೆ ವೆಂಕಟೇಶ್ ಸಂಪುಟ ಸೇರ್ಪಡೆಯಿಂದ ಜಿಪಂ/ ತಾಪಂ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷವು ಬಿಜೆಪಿಯನ್ನು ಮಣಿಸಲು ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಮುಸ್ಲಿಮರು ಕೂಡ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತನ್ವೀರ್ ಸೇಠ್ ಅವರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬದು ಅವರ ಬಯಕೆಯಾಗಿದೆ.