ಬೆಳಗಾವಿ ಲೋಕಸಭೆ ಚುನಾವಣೆ: MES ಅಭ್ಯರ್ಥಿಯಿಂದ ಬಿಜೆಪಿಗೆ ಪೆಟ್ಟು; ಮತ ವಿಭಜನೆಯಿಂದ ಕಾಂಗ್ರೆಸ್ ಗೆ ಲಾಭ!

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ, ಎಂಇಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದ ನಂತರ ಮರಾಠಾ ಸಮುದಾಯದ ಮತಗಳು ಯಾವ ರೀತಿಯಲ್ಲಿ ವಿಭಜನೆಯಾಗಲಿವೆ ಎಂಬ ಬಗ್ಗೆ ತಿಳಿಯಲಿದೆ.

ಸಾಂಪ್ರದಾಯಿಕವಾಗಿ, ಗಡಿಯಲ್ಲಿರುವ ಮರಾಠಿ ಮತದಾರರು ಬಿಜೆಪಿ ಬೆಂಬಲಿಗರಾಗಿದ್ದಾರೆ, ಹೀಗಾಗಿ ಎಂಇಎಸ್‌ಗೆ ಹೋಗುವ ಪ್ರತಿಯೊಂದು ಮತವೂ ಬಿಜೆಪಿಯ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. 2021 ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಕೊನೆಯ ಉಪಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ಅವರು ಗಳಿಸಿದ ಸುಮಾರು 1.16 ಲಕ್ಷ ಮತಗಳು ನೇರವಾಗಿ ಬಿಜೆಪಿಯ ಮೇಲೆ ಪ್ರಭಾವ ಬೀರಿತು . ಮಂಗಳಾ ಅಂಗಡಿ (ಹಾಲಿ ಸಂಸದೆ) ಅವರು ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ವಿರುದ್ಧ ಸುಮಾರು 4,000 ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

ಎಂಇಎಸ್ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಗೆಲ್ಲುವ ಅವಕಾಶಕ್ಕೆ ಧಕ್ಕೆ ತರಬಹುದು. ಎಂಇಎಸ್ ತನ್ನ ಜನಪ್ರಿಯ ನಾಯಕರಾದ ರಮಾಕಾಂತ್ ಕೊಂಡೂಸ್ಕರ್ ಅಥವಾ ಶುಭಂ ಶೆಲ್ಕೆ ಅವರನ್ನು ಕಣಕ್ಕಿಳಿಸಿದರೆ ಬಿಜೆಪಿ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಸಮಿತಿಯು ಕಡಿಮೆ ಪ್ರಾಬಲ್ಯವಿರುವ ನಾಯಕನನ್ನು ಕಣಕ್ಕಿಳಿಸಿದರೆ ಮರಾಠಿ ಮತದಾರರು ಶೆಟ್ಟರ್ ಅವರ ಹಿಂದೆ ಬಲವಾಗಿ ಒಟ್ಟುಗೂಡುತ್ತಾರೆ' ಎಂದು ಮರಾಠಿಯ ಹಿರಿಯ ಪತ್ರಕರ್ತ ಸಂಜಯ್ ಸೂರ್ಯವಂಶಿ ಅಭಿಪ್ರಾಯ ಪಟ್ಟಿದ್ದಾರೆ.

ಜಗದೀಶ್ ಶೆಟ್ಟರ್
ಶೆಟ್ಟರ್ ವೈಯಕ್ತಿಕ ಜೀವನ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

2014 ರಿಂದ ನಡೆದ ಕೆಲವು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಎಂಇಎಸ್ ಅಭ್ಯರ್ಥಿಗಳು ಸಾಕಷ್ಟು ಮತಗಳನ್ನು ಗಳಿಸಲು ಸಮರ್ಥರಾಗಿದ್ದಾರೆ ಅದು ಅಂತಿಮವಾಗಿ ಬಿಜೆಪಿಯ ಭವಿಷ್ಯದ ಮೇಲೆ ಪರಿಣಾಮ ಬೀರಿತು.

ಆದರೆ, ಪ್ರತಿಸ್ಪರ್ಧಿ ಅಭ್ಯರ್ಥಿಗಳು ಯಾರೇ ಆಗಿದ್ದರೂ ಶೆಟ್ಟರ್ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಂಇಎಸ್ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಗೆ ಲಾಭವಾಗಲಿದೆ. ಮತಗಳ ವಿಭಜನೆಯನ್ನು ತಡೆಯಲು ಬಿಜೆಪಿ ಮತ್ತು ಎಂಇಎಸ್ ನಡುವೆ ಒಳ ಒಪ್ಪಂದ ಮಾಡಿಕೊಂಡರೆ ಮಾತ್ರ ಇಂತಹ ಪರಿಸ್ಥಿತಿ ಸಾಧ್ಯ. ಆದರೆ, ಪಕ್ಷವು ಜನಪ್ರಿಯ ಮತ್ತು ಹೆಸರಾಂತ ನಾಯಕನನ್ನು ಕಣಕ್ಕಿಳಿಸಲಿದೆ ಎಂದು ಎಂಇಎಸ್ ಮೂಲಗಳು ಪ್ರತಿಪಾದಿಸುತ್ತವೆ.

ಮೂಲಗಳ ಪ್ರಕಾರ, ಬೆಳಗಾವಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಎಂಇಎಸ್ ನಾಯಕತ್ವವು ಮಂಗಳವಾರ ಬೆಳಗಾವಿಯಲ್ಲಿ 32 ಸದಸ್ಯರ ಸಮಿತಿಯನ್ನು ರಚಿಸಿದೆ. ಮೊದಲ ದಿನವೇ ಮಾಜಿ ಮೇಯರ್ ದಿವಂಗತ ಸಂಭಾಜಿ ಪಾಟೀಲ್ ಅವರ ಸೊಸೆ ಸಾಧನಾ ಪಾಟೀಲ್ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 9 ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com