ಲೋಕಸಭೆ ಚುನಾವಣೆಯಲ್ಲಿ 7 ಮೀಸಲು ಸ್ಥಾನ: ದಲಿತ ಮತಗಳ ಕ್ರೂಢೀಕರಣ, ಕಾಂಗ್ರೆಸ್ ಗೆ ವರದಾನ!

ಕರ್ನಾಟಕದಲ್ಲಿ ದಲಿತ ಬಲವರ್ಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ, ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಯಿದೆ.
ಎಲ್ ಹನುಮಂತಯ್ಯ
ಎಲ್ ಹನುಮಂತಯ್ಯ
Updated on

ಬೆಂಗಳೂರು: ಕರ್ನಾಟಕದಲ್ಲಿ ದಲಿತ ಬಲವರ್ಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ, ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ದಲಿತರ ಬಲವರ್ಧನೆ, ದಲಿತ ಮತಗಳ ಕ್ರೂಡೀಕರಣಕ್ಕೆ ಹಲವು ತಂತ್ರ ಹೆಣೆಯಲಾಗುತ್ತಿದೆ. ಕಲಬುರಗಿ, ವಿಜಯಪುರ, ಚಿತ್ರದುರ್ಗ, ಕೋಲಾರ ಮತ್ತು ಚಾಮರಾಜನಗರ ಮೀಸಲು ಕ್ಷೇತ್ರಗಳು ಮತ್ತು ರಾಯಚೂರು, ಬಳ್ಳಾರಿಯ ಎರಡು ಪರಿಶಿಷ್ಟ ಪಂಗಡದ ಕ್ಷೇತ್ರಗಳಲ್ಲಿ ಇದು ಕಾಂಗ್ರೆಸ್​ಗೆ ಪೂರಕವಾಗಿ ಪರಿಣಮಿಸಬಹುದು ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಮತ್ತು ದಲಿತ ಮುಖಂಡ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ದಲಿತರ ಮತದ ಮಹತ್ವವನ್ನು ವಿವರಿಸಿದ ಹನುಮಂತಯ್ಯ, ದಲಿತ ವರ್ಗದ ಮಾದಿಗರು 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ 30,000 ರಿಂದ 40,000 ಮತದಾರರಿದ್ದಾರೆ. ಇತ್ತೀಚೆಗೆ ಕೋಲಾರದಲ್ಲಿ ದಲಿತ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಮಾಜಿ ಶಾಸಕ ರಮೇಶ್ ಕುಮಾರ್ ವಿರುದ್ಧ ಸೆಣಸಾಡಿದ ನಂತರ ದಲಿತರ ಒಗ್ಗಟ್ಟಿನ ನಡೆಗೆ ಅಡೆತಡೆಗಳು ಎದುರಾಗಿವೆ. ಪಕ್ಷಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅವರು ಒಗ್ಗಟ್ಟಿನ ಸಭೆ ನಡೆಸಬೇಕಾಗಿದೆ. ಅವರು ಇಂತಹ ಸಣ್ಣ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲವೇ? ಪಕ್ಷದ ನಿಷ್ಠಾವಂತ ಮುನಿಯಪ್ಪ ಅವರನ್ನು ನಿರಾಸೆಗೊಳಿಸಲಾಗಿದೆ ಮತ್ತು ಇದು ದಲಿತ ಸಮುದಾಯದ ಮೇಲೆ ಪರಿಣಾಮ ಬೀರಬಹುದು ಮುನಿಯಪ್ಪ ಬೆಂಬಲಿಗರೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಮುನಿಯಪ್ಪ ಅವರನ್ನು ಸಂಪರ್ಕಿಸಿದಾಗ ಅವರು ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ದಲಿತರ ಮತ ಕ್ರೋಡೀಕರಣವಾಗಿದೆ ಅಥವಾ ಆಗುತ್ತಿದೆ ಎಂಬ ಅಭಿಪ್ರಾಯವನ್ನು ಒಪ್ಪಲಾಗದು, ಅಂದರೆ ಅಂದುಕೊಂಡ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಎಚ್. ಹನುಮಂತಪ್ಪ ಅಭಿಪ್ರಾಯಪಟ್ಟಿದ್ದಾರೆ. ದಲಿತ ಬಲವರ್ಧನೆ ಅಥವಾ ದಲಿತರ ಕ್ರೂಡೀಕರಣ ನಡೆಯುತ್ತಿರುವುದು ನನಗೆ ಕಾಣುತ್ತಿಲ್ಲ. ಬಹಳ ಹಿಂದೆ ದಲಿತ ಮತಗಳು ಒಗ್ಗಟ್ಟಿನಿಂದ ಕೂಡಿದ್ದವು. ಆದರೆ ಈಗ ಅದು ಕೋಮು ಮತ್ತು ಜಾತಿಗಳ ಆಧಾರದ ಮೇಲೆ ವಿಭಜನೆಯಾಗಿದೆ. ಚಿತ್ರದುರ್ಗದ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ಇಬ್ಬರು ದಲಿತ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆದ ಬಗ್ಗೆ ಮಾತನಾಡಿದರು.

ಎಲ್ ಹನುಮಂತಯ್ಯ
'ಅಹಿಂದ' ಮತಗಳತ್ತ HDK ಚಿತ್ತ: ಮೋದಿ ಕೈ ಬಲಪಡಿಸಲು ಬೆಂಬಲ ನೀಡುವಂತೆ ದಲಿತರು, ಮುಸ್ಲಿಮರಿಗೆ ಮನವಿ!

ಸಾಂಪ್ರದಾಯಿಕವಾಗಿ, ದಲಿತ ಬಲ ಸಮುದಾಯ ಕಾಂಗ್ರೆಸ್‌ಗೆ ಮತ ಹಾಕುತ್ತದೆ ಮತ್ತು ದಲಿತ ಎಡ ಸಮುದಾಯ ಬಿಜೆಪಿಗೆ ಮತ ಹಾಕುತ್ತದೆ. ಹೆಚ್ಚಿನ ದಲಿತರು ಅಂಬೇಡ್ಕರ್ ವಾದಿಗಳು ಮತ್ತು ಅಂಬೇಡ್ಕರ್ ಚಿಂತನೆಯ ಪ್ರಕ್ರಿಯೆಗೆ ಬದ್ಧರಾಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ವಿಮರ್ಶಿಸಿದ್ದಾರೆ.

ಈ ಬಾರಿ ದಲಿತ ಮತಗಳ ಪ್ರಮುಖ ಪಾಲು ಕಾಂಗ್ರೆಸ್‌ಗೆ ಸೇರುವ ನಿರೀಕ್ಷೆಯಿದೆ. ಏಕೆಂದರೆ ಹಿರಿಯ ದಲಿತ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ಕಾಂಗ್ರೆಸ್‌ಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com