ಬೆಂಗಳೂರು: ದೆಹಲಿಯಲ್ಲಿ ಪ್ರತಿಭಟನೆಗೆ ಬರುತ್ತಿರುವ ರೈತರನ್ನು ಹತ್ತಿಕ್ಕಲು ಮೋದಿ ಸರ್ಕಾರದಿಂದ ಡ್ರೋನ್ ಮೂಲಕ ದಾಳಿ ನಡೆಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಇದು ಇಸ್ರೇಲ್ ಅಲ್ಲ, ಗಾಜಾ ಪಟ್ಟಿಯೂ ಅಲ್ಲ, ಇದು ಪಾಕಿಸ್ತಾನ, ಚೀನಾ ಗಡಿಯೂ ಅಲ್ಲ. ಇವರು ಉಗ್ರರೂ ಅಲ್ಲ, ದರೋಡೆಕೋರರೂ ಅಲ್ಲ, ಇದು ದೆಹಲಿಯಲ್ಲಿ ಪ್ರತಿಭಟನೆಗೆ ಬರುತ್ತಿರುವ ರೈತರನ್ನು ಹತ್ತಿಕ್ಕಲು ಮೋದಿ ಸರ್ಕಾರದಿಂದ ಡ್ರೋನ್ ಮೂಲಕ ದಾಳಿ ಎಂದು ಹೇಳಿದೆ.
ಈ ಟೆಕ್ನಾಲಜಿಯ ಭದ್ರತೆಯನ್ನು ಪಾಕ್ ಗಡಿಯಲ್ಲಿ ಬಳಸಿದ್ದರೆ ನಮ್ಮ ಯೋಧರ ಜೀವ ಉಳಿಯುತ್ತಿತ್ತು, ಚೀನಾ ಗಾಡಿಯಲ್ಲಿ ಬಳಸಿದ್ದರೆ ಭಾರತದ ನೆಲದ ಆತಿಕ್ರಮಣವನ್ನು ತಡೆಯಬಹುದಿತ್ತು ಎಂದು ಟೀಕಾಪ್ರಹಾರ ನಡೆಸಿದೆ.
Advertisement