ಲೋಕಸಭೆ ಚುನಾವಣೆ: ಮೂವರು ಮಾಜಿ ಸಿಎಂಗಳಿಗೆ ಮಣೆ ಹಾಕಿದ ಮತದಾರ; 2ನೇ ಬಾರಿಗೆ HDK ಸಂಸತ್ ಪ್ರವೇಶ!

ಲೋಕಸಭಾ ಚುನಾವಣೆಯಲ್ಲಿಅದೃಷ್ಟ ಪರೀಕ್ಷೆಗೆ ಇಳಿದಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಗೆಲುವು ಸಾಧಿಸಿದ್ದಾರೆ.
ಎಚ್ ಡಿಕೆ, ಶೆಟ್ಟರ್ ಮತ್ತು ಬೊಮ್ಮಾಯಿ
ಎಚ್ ಡಿಕೆ, ಶೆಟ್ಟರ್ ಮತ್ತು ಬೊಮ್ಮಾಯಿ
Updated on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿಅದೃಷ್ಟ ಪರೀಕ್ಷೆಗೆ ಇಳಿದಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಅವರು ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನಿಂದ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯಿಂದ ಶೆಟ್ಟರ್ ಮತ್ತು ಬೊಮ್ಮಾಯಿ ಅವರು ಗೆದ್ದಿದ್ದಾರೆ, ಈ ಮೂವರು ಎನ್‌ಡಿಎ ಮೈತ್ರಿ ಕೂಟದವರು ಎನ್ನುವುದು ವಿಶೇಷ. ಶೆಟ್ಟರ್ ಮತ್ತು ಬೊಮ್ಮಾಯಿ ಇವರಿಬ್ಬರು ಹುಬ್ಬಳ್ಳಿಯವರು ಎನ್ನುವುದು ಮತ್ತೊಂದು ವಿಶೇಷ. ಕುಮಾರಸ್ವಾಮಿ 2ನೇ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿದ್ದರೆ, ಬಿಜೆಪಿಯ ಶೆಟ್ಟರ್ ಮತ್ತು ಬೊಮ್ಮಾಯಿ ಇಬ್ಬರೂ ಇದೇ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಎಚ್ ಡಿಕೆ, ಶೆಟ್ಟರ್ ಮತ್ತು ಬೊಮ್ಮಾಯಿ
ರಾಷ್ಟ್ರ ರಾಜಕಾರಣಕ್ಕೆ ದಕ್ಷಿಣ ರಾಜ್ಯಗಳಲ್ಲೇ ಅತಿ ಹೆಚ್ಚು BJP ಸಂಸದರನ್ನು ಕೊಟ್ಟ ಕರ್ನಾಟಕ: ಮತ ಗಳಿಕೆಯಲ್ಲೂ ಸಿಂಹಪಾಲು!

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ವಿರುದ್ಧ 43,513 ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನೂ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಲಾವಣೆಯಾದ ಒಟ್ಟು 13,75,285 ಮತಗಳಲ್ಲಿ 7,56,471 ಮತ ಗಳಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ 5,80,897 ಮತಗಳನ್ನು ಪಡೆದು ಸೋಲುಂಡರು. ಶೆಟ್ಟರ್‌ ಅವರಿಗೆ ಬೆಳಗಾವಿ ಟಿಕೆಟ್‌ ಘೋಷಣೆ ಮಾಡಿದಾಗಲೇ ‘ಅರ್ಧ ಗೆದ್ದೆವು’ ಎಂಬ ವಿಶ್ವಾಸ ಕಾಂಗ್ರೆಸ್ಸಿಗರಲ್ಲಿ ಮೂಡಿತ್ತು. ಆ ಅತಿಯಾದ ವಿಶ್ವಾಸವೇ ಅವರನ್ನು ಸೋಲಿನ ದವಡೆಗೆ ತಳ್ಳಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com