ಮನಸ್ಸಿನಲಿ ಬಹಳ ನೋವಿದೆ ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ: ಚುನಾವಣೆ ನಂತರ ಹೇಳುತ್ತೇನೆ; ಸಿ.ಟಿ ರವಿ

ಮನಸ್ಸಿನಲ್ಲಿ ಬಹಳ ನೋವುಗಳಿವೆ. ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ನುಂಗಿಕೊಂಡಿದ್ದೇನೆ. ಲೋಕಸಭೆ ಚುನಾವಣೆ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
ಸಿ.ಟಿ ರವಿ
ಸಿ.ಟಿ ರವಿ

ಚಿಕ್ಕಮಗಳೂರು: ಮನಸ್ಸಿನಲ್ಲಿ ಬಹಳ ನೋವುಗಳಿವೆ. ರಾಷ್ಟ್ರದ ಹಿತಕ್ಕಾಗಿ ಎಲ್ಲವನ್ನು ನುಂಗಿಕೊಂಡಿದ್ದೇನೆ. ಲೋಕಸಭೆ ಚುನಾವಣೆ ಬಳಿಕ ಎಲ್ಲವನ್ನೂ ಜನರ ಮುಂದಿಡುತ್ತೇನೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಯಾರು ಹೇಗೆ ನಡೆದುಕೊಂಡರು ಎಂದು ಗೊತ್ತಿದೆ. ಹೆಚ್ಚು ದಿನ ಮನಸ್ಸಿನಲ್ಲೇ ಇಟ್ಟು ಕೊಳ್ಳಲಾಗದು ಅವುಗಳನ್ನು ಹೇಳಲೇಬೇಕು.

ವೈಯಕ್ತಿಕ ನೆಲೆಯಲ್ಲಿ ಲೋಕಸಭೆ ಚುನಾವಣೆ ನಂತರ ಮಾಡುತ್ತೇನೆ ಎಂದು ಯಾರ ಹೆಸರನ್ನೂ ಹೇಳದೆ ಸ್ವಪಕ್ಷದವರ ವಿರುದ್ಧ ಸುದ್ದಿಗಾರರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಸಿ.ಟಿ ರವಿ
ಈಗ ಮಾತನಾಡಿದರೆ ನಮ್ಮ ಮಾತೇ ನಮಗೆ ತಿರುಗುಬಾಣ ಆಗುತ್ತದೆ: ಸಿ ಟಿ ರವಿ

ಸದ್ಯಕ್ಕೆ ರಾಷ್ಟ್ರದ ಹಿತ ಮುಖ್ಯ, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕು. ಅದಷ್ಟೇ ನಮ್ಮ ಮುಂದಿನ ಗುರಿ. ಸಮಯ ಬಂದಾಗ ಬೇರೆ ವಿಷಯಗಳನ್ನು ಹೇಳುತ್ತೇನೆ ಎಂದರು.

ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರೂ ಕೇವಲ ಲೋಕಸಭಾ ಚುನಾವಣೆ ನಂತರ. ಈಗೇನಿದ್ರೂ ಪಕ್ಷ ಹಿತ ಮತ್ತು ರಾಷ್ಟ್ರ ಹಿತಕ್ಕಾಗಿ ಬಹಳ ಸಂಗತಿಗಳನ್ನ ನುಂಗಿಕೊಳ್ಳಬೇಕಾಗುತ್ತದೆ. ಈ ವಿಷಯಗಳನ್ನು ಬಹಳ ದಿನ ಹೊಟ್ಟೆಯೊಳಗೆ ಇಟ್ಕೊಳ್ಳೋಕೆ ಆಗಲ್ಲ. ಸಮಯ, ಸಂದರ್ಭ ಬಂದಾಗ ಹೇಳಬೇಕಾಗುತ್ತೆ, ಆಗ ಜನರ ಮುಂದೆ ಹೇಳುವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com