ಅಂಬೇಡ್ಕರ್ ಇಸ್ಲಾಂ ಸ್ವೀಕರಿಸಲು ಸಿದ್ಧರಿದ್ದರು; ಮತಾಂತರಗೊಂಡಿದ್ದರೆ ದೇಶದ ದಲಿತರೆಲ್ಲರೂ ಮುಸ್ಲಿಮರಾಗುತ್ತಿದ್ದರು: ಖಾದ್ರಿ ವಿವಾದಾತ್ಮಕ ಹೇಳಿಕೆ

ಜಿ.ಪರಮೇಶ್ವರ ಅವರನ್ನು ಪೀರ್ ಸಾಬ್, ಆರ್.ಬಿ.ತಿಮ್ಮಾಪುರ್ ಅವರನ್ನು ರಹೀಮ್ ಸಾಬ್ ಖಾನ್, ಎಲ್.ಹನುಮಂತಯ್ಯ ಅವರನ್ನು ಹುಸೇನ್ ಸಾಬ್ ಎಂದು ಕರೆಯುತ್ತಿದ್ದರು.
Azeempeer Khadri
ಅಜ್ಜಂಪೀರ್ ಖಾದ್ರಿ
Updated on

ಹುಬ್ಬಳ್ಳಿ: ವಿಧಾನಸಭಾ ಉಪಚುನಾವಣೆಯ ಮತದಾನದ ಮುನ್ನಾದಿನಾದಂದು ಕಾಂಗ್ರೆಸ್ ಮುಖಂಡ ಸೈಯದ್ ಅಜಂಪೀರ್ ಖಾದ್ರಿ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. "ಡಾ.ಬಿ.ಆರ್. ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರೆ ದೇಶದ ದಲಿತರೆಲ್ಲರೂ ಮುಸ್ಲಿಮರಾಗುತ್ತಿದ್ದರು. ಆಗ ಸಚಿವರಾದ ಜಿ.ಪರಮೇಶ್ವರ ಅವರನ್ನು ಪೀರ್ ಸಾಬ್, ಆರ್.ಬಿ.ತಿಮ್ಮಾಪುರ್ ಅವರನ್ನು ರಹೀಮ್ ಸಾಬ್ ಖಾನ್, ಎಲ್.ಹನುಮಂತಯ್ಯ ಅವರನ್ನು ಹುಸೇನ್ ಸಾಬ್ ಎಂದು ಕರೆಯುತ್ತಿದ್ದರು. ಅಲ್ಲದೆ, ಮುಸ್ಲಿಮರು ಮತ್ತು ದಲಿತರ ನಡುವೆ ನಿಕಟ ಸಂಬಂಧವಿರುತ್ತಿತ್ತು. ಮುಸ್ಲಿಮರು ಎಲ್ಲಿ ಉಳಿದುಕೊಂಡಿದ್ದರೂ, ಅವರ ಸುತ್ತಮುತ್ತ ದಲಿತ ಜನರನ್ನು ಕಾಣಬಹುದು ಎಂದು ಅಜಂಪೀರ್ ಖಾದ್ರಿ ಹೇಳಿದರು.

ಶಿಗ್ಗಾಂವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರಖಾನ್‌ ಪಠಾಣ್‌ ಪರ ಪ್ರಚಾರ ಮಾಡುವ ವೇಳೆ ನಡೆದ ಪರಿಶಿಷ್ಟ ಜಾತಿ ಸಮುದಾಯದ ಆದಿಜಾಂಬವರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೇ ಈ ರೀತಿಯ ಹೇಳಿಕೆ ನೀಡಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಎಲ್ಲರೂ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಮತದಾನದ ದಿನವಾದ ಬುಧವಾರದಂದು ಅವರ ಮಾತುಗಳು ಚರ್ಚೆಗೆ ಕಾರಣವಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಪ್ರತಿಪಕ್ಷ ಬಿಜೆಪಿ ಖಾದ್ರಿ ವಿರುದ್ಧ ವಾಗ್ದಾಳಿ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಅವರ ಹೇಳಿಕೆಯಿಂದ ದೂರ ಸರಿದಿದೆ.

Azeempeer Khadri
ಶಿಗ್ಗಾಂವಿ ಉಪ ಚುನಾವಣೆ: ಮತದಾನಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗೆ ಬಿಗ್ ಶಾಕ್, BJP ದೂರು ದಾಖಲು

ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ಖಾದ್ರಿ, "ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುವಾಗ ನಾನು ಭಾವನಾತ್ಮಕವಾಗಿ ವರ್ತಿಸಿದ್ದೇನೆ, ತಪ್ಪು ಸಂಭವಿಸಿದೆ, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ, ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಈ ಹೇಳಿಕೆಯನ್ನು ಚುನಾವಣೆಯಲ್ಲಿ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಆದರೆ, ಕ್ಷೇತ್ರದ ಯಾವೊಬ್ಬ ದಲಿತನೂ ಈ ಹೇಳಿಕೆಯಲ್ಲಿ ತಪ್ಪು ಮಾಡಿಲ್ಲ, ಶಿಗ್ಗಾವಿ ಉಪ ಚುನಾವಣೆ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com