50 ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರೂ ಆಫರ್: ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹೇಳಿಕೆ ಸಾಬೀತುಪಡಿಸುವ ಸವಾಲು!

ಯಾವುದೇ ಸಂದರ್ಭದಲ್ಲಿ, ಸರ್ಕಾರದ ಬಳಿ ಅಂತಹ ನಿರ್ದಿಷ್ಟ ಮಾಹಿತಿ ಇದ್ದರೆ, ಅದು ತನಿಖೆಗೆ ಆದೇಶಿಸಬೇಕು ಮತ್ತು ರಾಜ್ಯದ ಜನರ ಮುಂದೆ ಎಲ್ಲಾ ಸಂಗತಿಗಳನ್ನು ಪ್ರಸ್ತುತಪಡಿಸಬೇಕು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಕರ್ನಾಟಕ ರಾಜಕೀಯ ಚಿತ್ರಣವೇ ಹಾಗೆ, ವಿಭಿನ್ನ, ಹಲವು ತಿರುವುಗಳು, ವಿಶೇಷ ಸನ್ನಿವೇಶಗಳು, ಕೆಲವೊಮ್ಮೆ, ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಮ್ಮ ಬೆಳವಣಿಗೆಗಳ ವೇಗವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಸಂಭವನೀಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ವಾರ ಉಪಚುನಾವಣೆಯಲ್ಲಿ ಮತದಾನ ಮುಗಿಯುವ ಕೆಲವೇ ಗಂಟೆಗಳ ಮೊದಲು, 50 ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ತಲಾ 50 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಆಮಿಷವೊಡ್ಡಿತ್ತು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಬಾಂಬ್ ಸಿಡಿಸಿದರು. ಇದು ಭಾರೀ ರಾಜಕೀಯ ಕಚ್ಚಾಟಕ್ಕೆ ಕಾರಣವಾಯಿತು. ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಗಳ ಕುರಿತು ಸಿಎಂ ಹೇಳಿಕೆಯನ್ನು ಹಲವು ಸಚಿವರು ಬೆಂಬಲಿಸಿದರು. ಆದರೆ, ಬಿಜೆಪಿಯ ಯಾರು ಕಾಂಗ್ರೆಸ್ ನ ಯಾವ ಶಾಸಕರಿಗೆ ಆಫರ್ ನೀಡಿದ್ದಾರೆ ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ನೀಡಿಲ್ಲ.

ಸರ್ಕಾರ ತನ್ನ ಪೂರ್ಣಾವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂದು ಬಿಜೆಪಿ-ಜೆಡಿಎಸ್ ನಾಯಕರ ಪುನರಾವರ್ತಿತ ಹೇಳಿಕೆಗಳು ಸಾಮಾನ್ಯ ಆರೋಪಗಳಿಗೆ ಸ್ವಲ್ಪ ಪುಷ್ಠಿ ನೀಡಿದ್ದರೂ, ಅಂತಹ ನಿರ್ದಿಷ್ಟ ಆರೋಪಗಳನ್ನು ಮಾಡಿದ ಸಮಯ ಮತ್ತು ರೀತಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ನೆರೆಯ ಮಹಾರಾಷ್ಟ್ರ ಚುನಾವಣೆಯ ಪ್ರಚಾರ ಗರಿಗೆದರಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಸರ್ಕಾರ ಮತ್ತು ಸಿಎಂ ವಿರುದ್ಧದ ಮುಡಾ ಹಗರಣ ಕುರಿತು ಗಂಭೀರ ಆರೋಪಗಳ ತನಿಖೆ ನಡೆಯುತ್ತಿರುವಾಗಲೇ ಆಘಾತಕಾರಿ ಸಂಗತಿ ಬಹಿರಂಗವಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮತ್ತು ಲೋಕಾಯುಕ್ತ ಪೊಲೀಸರು ಸಿಎಂ ಮತ್ತು ಇತರ ಹಲವರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಕೇಂದ್ರೀಯ ಸಂಸ್ಥೆ ಹಲವರನ್ನು ವಿಚಾರಣೆಗೊಳಪಡಿಸಿದ್ದು, ಲೋಕಾಯುಕ್ತ ಪೊಲೀಸರು ಸಿಎಂ ಮತ್ತು ಅವರ ಪತ್ನಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಮುಡಾ ಪ್ರಕರಣವು ಸಿಎಂ ಪ್ರತಿಷ್ಠೆಗೆ ಕಳಂಕ ತರುವ ಯತ್ನ ಎಂದು ಕಾಂಗ್ರೆಸ್ ಬಣ್ಣಿಸಿದರೆ, ನ್ಯಾಯಾಲಯಗಳು ಕಟುವಾದ ಟೀಕೆ ಮಾಡಿವೆ.

ರಾಜ್ಯ-ಸರ್ಕಾರದ ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ. ರಾಜ್ಯ ಪೊಲೀಸ್‌ನ ವಿಶೇಷ ತನಿಖಾ ತಂಡ (SIT) ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಖಾಸಗಿ ಖಾತೆಗಳಿಗೆ ವರ್ಗಾವಣೆಯಾಗಿರುವ ನಿಗಮದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿದೆ. ಹಣಕಾಸು ಖಾತೆ ಸಿಎಂ ಬಳಿ ಇದೆ.

ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನಗಳ ಹೇಳಿಕೆಗಳನ್ನು ಬೆಂಬಲಿಸಲು ಕಾಂಗ್ರೆಸ್ ನಾಯಕರು ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿನ ಹಿಂದಿನ ಬೆಳವಣಿಗೆಗಳನ್ನು ಉಲ್ಲೇಖಿಸಬಹುದು, ಆದರೆ 50 ಶಾಸಕರು ದೊಡ್ಡ ಸಂಖ್ಯೆಯಾಗಿದ್ದು, ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಶೇಕಡಾ 40ರಷ್ಟು ಬಲವಾಗುತ್ತದೆ.

ಯಾವುದೇ ಸಂದರ್ಭದಲ್ಲಿ, ಸರ್ಕಾರದ ಬಳಿ ಅಂತಹ ನಿರ್ದಿಷ್ಟ ಮಾಹಿತಿ ಇದ್ದರೆ, ಅದು ತನಿಖೆಗೆ ಆದೇಶಿಸಬೇಕು ಮತ್ತು ರಾಜ್ಯದ ಜನರ ಮುಂದೆ ಎಲ್ಲಾ ಸಂಗತಿಗಳನ್ನು ಪ್ರಸ್ತುತಪಡಿಸಬೇಕು. ಪ್ರತಿಪಕ್ಷಗಳು ಕೂಡ ಅದನ್ನೇ ಒತ್ತಾಯಿಸುತ್ತಿವೆ. ಇದಲ್ಲದೆ, ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಕಾಂಗ್ರೆಸ್‌ನ ಅನೇಕರು ಚಿಂತಿತರಾಗಿದ್ದಾರೆ. ಜೆಡಿಎಸ್ ನಾಯಕನ ವಿರುದ್ಧ ಜಮೀರ್ ಹೇಳಿಕೆ ಪ್ರಬಲ ಒಕ್ಕಲಿಗ ಮತಗಳನ್ನು ಜೆಡಿಎಸ್ ಪರವಾಗಿ ಕ್ರೋಢೀಕರಿಸಲು ಸಹಾಯ ಮಾಡಬಹುದೆಂಬ ಆತಂಕವಿದೆ, ಚನ್ನಪಟ್ಟಣದಲ್ಲಿ ಗೆಲುವಿನ ಅಂತರ ಕ್ಷೀಣವಾಗಿರುತ್ತದೆ ಎಂದು ಊಹಿಸಲಾಗಿದೆ.

CM Siddaramaiah
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ ಜಟಾಪಟಿ: ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಮತ್ತೊಂದು ಅಧ್ಯಾಯ; ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ ದೀರ್ಘಾಯುಷ್ಯ!

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋದರ ಡಿ.ಕೆ.ಸುರೇಶ್ ಸೋಲನುಭವಿಸಿದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್‌ನಿಂದ ವಿಧಾನಸಭಾ ಸ್ಥಾನವನ್ನು ಕಸಿದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಸರ್ಕಾರದಲ್ಲಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಹತ್ವಾಕಾಂಕ್ಷೆಯ ನಾಯಕನಿಗೆ, ಪಕ್ಷದಲ್ಲಿ ಒಕ್ಕಲಿಗ ಬಲಿಷ್ಠನಾಗಿ ಹೊರಹೊಮ್ಮಲು ಚನ್ನಪಟ್ಟಣದ ಗೆಲುವು ನಿರ್ಣಾಯಕವಾಗಿದೆ. 2023ರಲ್ಲಿ ಗೆದ್ದಿದ್ದ ಸ್ಥಾನವನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಶತಾಯಗತಾಯ ಪ್ರಯತ್ನ ಹಾಕಿದ್ದಾರೆ.

ಕುಮಾರಸ್ವಾಮಿ ವಿರುದ್ಧದ ಜಮೀರ್ ಖಾನ್ ಹೇಳಿಕೆಗಳು ಮತ್ತು ವಕ್ಫ್ ಮಂಡಳಿಯ ಕ್ರಮವು ರಾಜ್ಯದ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಇತರ ಚುನಾವಣೆಗೆ ಒಳಪಟ್ಟ ರಾಜ್ಯಗಳಲ್ಲಿ ಬಿಜೆಪಿಗೆ ಶಕ್ತಿ ನೀಡಿದೆ. ಕರ್ನಾಟಕವು ವಕ್ಫ್ ಭೂಮಿ ಸಮಸ್ಯೆಯ ಕೇಂದ್ರಬಿಂದುವಾಯಿತು, ವಕ್ಫ್ (ತಿದ್ದುಪಡಿ) ಮಸೂದೆ 2024 ರ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ನೊಂದ ವ್ಯಕ್ತಿಗಳಿಂದ ಪ್ರತಿಕ್ರಿಯೆ ಪಡೆಯಲು ರಾಜ್ಯಕ್ಕೆ ಭೇಟಿ ನೀಡಿದರು.

ವಾಸ್ತವವಾಗಿ, ವಕ್ಫ್ ಭೂ ವಿವಾದದ ವಿರುದ್ಧದ ಹೋರಾಟವು ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳನ್ನು ಮುನ್ನೆಲೆಗೆ ತಂದಿತು. ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಕಳೆದರೂ ಪಕ್ಷದೊಳಗಿನ ಹಲವು ಹಿರಿಯರು ಅವರ ನಾಯಕತ್ವವನ್ನು ಬಹಿರಂಗವಾಗಿ ಪ್ರಶ್ನಿಸುತ್ತಲೇ ಇದ್ದಾರೆ.

ಮುಡಾ ವಿಚಾರವಾಗಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡ ಸಂದರ್ಭ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿದ್ದವು. ಪರಿಹರಿಸದಿದ್ದರೆ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ವಿರುದ್ಧವಾಗಿ ಪಕ್ಷಕ್ಕೆ ಪರಿಣಾಮ ಬೀರಬಹುದು.

ಸದ್ಯಕ್ಕೆ, ಎಲ್ಲರ ಚಿತ್ತ ನವೆಂಬರ್ 23 ರ ಉಪಚುನಾವಣೆ ಫಲಿತಾಂಶಗಳ ಮೇಲಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳಿಗೆ ಉಪಚುನಾವಣೆಯಲ್ಲಿ ಲಾಭವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿಎಂಗೆ ಈ ಉಪಚುನಾವಣೆ ಫಲಿತಾಂಶವೇ ಮುಖ್ಯ. ಉತ್ತಮ ಪ್ರದರ್ಶನವು ಅವರ ಸ್ಥಾನವನ್ನು ಪ್ರತಿಪಾದಿಸಲು ಮತ್ತು ಸ್ವಲ್ಪ ಮಟ್ಟಿಗೆ ಪಕ್ಷದ ಒಳಗೆ ಮತ್ತು ಹೊರಗೆ ಅವರ ವಿರೋಧಿಗಳನ್ನು ಮೌನಗೊಳಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ಫಲಿತಾಂಶ ವಿರುದ್ಧವಾದರೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟವಾಗಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com