ದಶಕಗಳ ನಂತರ ವಿಧಾನಮಂಡಲ ಅಧಿವೇಶನದಲ್ಲಿ ಮೊಬೈಲ್ ಬಳಕೆ ಮುಕ್ತ; ಸಚಿವರು, ಶಾಸಕರಿಗೆ 5G ವೈಫೈ ಸೌಲಭ್ಯ!

ದಶಕಗಳ ನಂತರ ಸೋಮವಾರದಿಂದ ವಿಧಾನಮಂಡಲದ ಒಳಗೆ ಮತ್ತು ಸುತ್ತ ಮುತ್ತ ಜಾಮರ್‌ಗಳಿಲ್ಲದೆ ಮೊಬೈಲ್ ಫೋನ್‌ಗಳನ್ನು ಮುಕ್ತವಾಗಿ  ಕೊಂಡೊಯ್ಯಬಹುದಾಗಿದೆ.
ವಿಧಾನ ಸೌಧ
ವಿಧಾನ ಸೌಧ
Updated on

ಬೆಂಗಳೂರು: ದಶಕಗಳ ನಂತರ ಸೋಮವಾರದಿಂದ ವಿಧಾನಮಂಡಲದ ಒಳಗೆ ಮತ್ತು ಸುತ್ತ ಮುತ್ತ ಜಾಮರ್‌ಗಳಿಲ್ಲದೆ ಮೊಬೈಲ್ ಫೋನ್‌ಗಳನ್ನು ಮುಕ್ತವಾಗಿ  ಕೊಂಡೊಯ್ಯಬಹುದಾಗಿದೆ.

ಸೋಮವಾರದಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಿದ ಸ್ಪೀಕರ್ ಯುಟಿ ಖಾದರ್, ದಶಕಗಳಿಂದ ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನದಲ್ಲಿದ್ದ ಜಾಮರ್ ಗಳನ್ನು ತೆಗೆದುಹಾಕಲಾಗಿದೆ. ಈಗ ಕರೆ ಮಾಡಲು ಅಥವಾ ಸ್ವೀಕರಿಸಲು ಯಾವುದೇ ಸಮಸ್ಯೆ ಇಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಅಲ್ಲದೆ, ವಿಧಾನಸೌಧದ ಒಳಗೆ 5G ವೈಫೈ ಸೇವೆಯನ್ನು ಸಕ್ರಿಯಗೊಳಿಸಲಾಗಿದೆ ಮತ್ತು ಶಾಸಕರು ತಮ್ಮ ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಸಾಧನಗಳನ್ನು ಬಳಸಬಹುದು. ತಾಂತ್ರಿಕ ತಂಡವು ಯೋಜನೆಯನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು. 5G ಸೇವೆಯ ಡೀಬಗ್ ಮಾಡುವಿಕೆ ಪೂರ್ಣಗೊಂಡಿದೆ ಮತ್ತು ಇದು ಸಿಗ್ನಲ್ ಸಾಮರ್ಥ್ಯವು ಅತ್ಯುತ್ತಮವಾಗಿದೆ ಎಂದು ತೋರಿಸುತ್ತದೆ.

ಅಧಿವೇಶನಗಳಲ್ಲಿ ಸದಸ್ಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲರನ್ನೂ  ಉಪಸ್ಥಿತರಿರಬೇಕೆಂಬ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮವಾಗಿದೆ. ಗ್ಯಾಜೆಟ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದಲ್ಲವೇ ಎಂದು ಕೇಳಿದಾಗ, "ನಮ್ಮ ಎಲ್ಲಾ ಶಾಸಕರು ಜವಾಬ್ದಾರರು ಎಂದು ನಾವು ನಂಬುತ್ತೇವೆ ಎಂದು ಖಾದರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

8.55 ಅಥವಾ 9 ಗಂಟೆಗೆ ಮುಂಚಿತವಾಗಿ ಅಧಿವೇಶನವನ್ನು ಪ್ರಾರಂಭಿಸಲು ಸ್ಪೀಕರ್ ಖಾದರ್ ಬಯಸಿದ್ದಾರ. ಏಕೆಂದರೆ ಶಾಸಕರು ಸುಮಾರು 7.30-7.45 ಗಂಟೆಗೆ ಸಿದ್ಧರಾಗುತ್ತಾರೆ  ಆ ನಂತರ ಅವರು ತಮ್ಮ ಮತದಾರರನ್ನು ಭೇಟಿ ಮಾಡುತ್ತಾರೆ ಅಥವಾ ಕೆಲವು ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ತಮ್ಮ ಮತದಾರರ ಕೆಲಸಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ.  ಹೀಗಾಗಿ ಅವರು ಅಧಿವೇಶನಗಳಿಗೆ ತಡವಾಗಿ ಬರುತ್ತಾರೆ. ಅಧಿವೇಶನವು ಬೇಗನೆ ಆರಂಭವಾದಾಗ, ಅವರು ಸದನಕ್ಕೆ ಬೇಗ ಬಂದು ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.

ಸದನಕ್ಕೆ ಹೊಸಬರ ಬಗ್ಗೆ ಕಳವಳ ವ್ಯಕ್ತಪಡಿಸಿದ ಖಾದರ್, ಈ ಸರ್ಕಾರ ರಚನೆಯಾದ ನಂತರ ಇದು ಈಗ ನಾಲ್ಕನೇ ಅಧಿವೇಶನವಾಗಿದೆ ಮತ್ತು ಅವರು ನಿಜವಾಗಿಯೂ ಹೊಸಬರಲ್ಲ. ನಾವು ಅವರಿಗೆ ತರಬೇತಿಯನ್ನುನೀಡಿದ್ದೇವೆ ಎಂದಿದ್ದಾರೆ.

ಶಾಸಕರಿಗೆ ಉಪಹಾರ ನೀಡಲು ಬೆಂಗಳೂರಿನ ಸುತ್ತಮುತ್ತಲಿನ ಪ್ರಸಿದ್ಧ ತಿನಿಸುಗಳನ್ನು ಸೆಕ್ರೆಟರಿಯೇಟ್ ಸಂಪರ್ಕಿಸಿದೆ ಎಂದು ಅವರು ಹೇಳಿದರು. ಇದು ಬೆಳಿಗ್ಗೆ ರೆಸ್ಟೋರೆಂಟ್‌ಗಳನ್ನು ಹುಡುಕಲು ಹೋಗುವ ಸಮಯವನ್ನು ವ್ಯರ್ಥ ಮಾಡದಂತೆ ತಡೆಯುತ್ತವೆಎಂದು ಅವರು ಹೇಳಿದರು. ಸೋಮವಾರದ ಅಧಿವೇಶನ ಬೇಗ ಆರಂಭವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜ್ಯಪಾಲರ ಪರಮಾಧಿಕಾರ. "ಅದರ ನಂತರ, ನಾವು ಅಧಿವೇಶನಗಳನ್ನು ಬೇಗನೆ ಪ್ರಾರಂಭಿಸಲು ಪ್ರಯತ್ನಿಸುತ್ತೇವೆ" ಎಂದು ಅವರು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿರಣ್ ಗಾಜನೂರ ಮಾತನಾಡಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಹುತೇಕ ಜನಪ್ರತಿನಿಧಿಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದು ಅಧಿವೇಶನಗಳಲ್ಲಿ  ಶಾಸಕರ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರಬಹುದು. ಜನಪ್ರತಿನಿಧಿಗಳನ್ನು ಸದನಕ್ಕೆ ಕರೆತರಲು ಸ್ಪೀಕರ್ ಮತ್ತು ಅವರ ಕಚೇರಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ವಿಧಾನಸಭೆಯಲ್ಲಿ 5G ನೆಟ್‌ವರ್ಕ್‌ನೊಂದಿಗೆ, ಜನಪ್ರತಿನಿಧಿಗಳು ಕ್ಷೇತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com