ಹುಕ್ಕೇರಿ ಕ್ಷೇತ್ರಕ್ಕೆ ಹೊರಗಿನವರು ಬರುವ ತಾಕತ್ತಿಲ್ಲ; ಸಮಯ ಬಂದಾಗ ಸೂಕ್ತ ಉತ್ತರ ಕೊಡುವೆ: ರಮೇಶ್ ಕತ್ತಿಗೆ ಜಾರಕಿಹೊಳಿ ತಿರುಗೇಟು

ಈ ಸಭೆಗಳು ಕಳೆದ 20 ವರ್ಷಗಳಿಂದ ನಮ್ಮ ವಿರುದ್ಧ ನಡೆಯುತ್ತಿವೆ. ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸಲಿ, ನಾವು ನಮ್ಮ ಏಕತೆಯನ್ನು ಪ್ರದರ್ಶಿಸುತ್ತೇವೆ. ರಾಜಕೀಯದಲ್ಲಿ ಇದು ಸಾಮಾನ್ಯ.
Minister Satish Jarkiholi
ಸಚಿವ ಸತೀಶ್ ಜಾರಕಿಹೊಳಿ
Updated on

ಬೆಳಗಾವಿ: ಹುಕ್ಕೇರಿ ಕ್ಷೇತ್ರಕ್ಕೆ ಹೊರಗಿನವರು ಬರುವ ತಾಕತ್ತಿಲ್ಲ ಎಂಬ ಮಾಜಿ ಸಂಸದ ರಮೇಶ್ ಕತ್ತಿಯವರ ಹೇಳಿಕೆಗೆ ಸರಿಯಾದ ಸಮಯದಲ್ಲಿ ಸೂಕ್ತ ಉತ್ತರ ನೀಡುವೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಸೋಮವಾರ ತಿರುಗೇಟು ನೀಡಿದ್ದಾರೆ.

ನಿಡಸೋಸಿಯ ದುರದುಂಡೇಶ್ವರ ಮಠದಲ್ಲಿ ಪೀಠಾಧಿಪತಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯವರೊಂದಿಗೆ ನಡೆದ ಸಭೆಯ ನಂತರ ಜಾರಕಿಹೊಳಿಯವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ರಮೇಶ್ ಕತ್ತಿಯವರ ಹೇಳಿಕೆಗೆ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುತ್ತೇನೆಂದು ಹೇಳಿದರು.

ಹುಕ್ಕೇರಿ ವಿದ್ಯುತ್ ಸಹಕಾರ ಸಂಘಕ್ಕೆ ಚುನಾವಣೆ ನಡೆಸುವ ಬಗ್ಗೆ ತಕ್ಷಣದ ಯೋಜನೆ ಇಲ್ಲ. ನಾವು ನಾಯಕರೊಂದಿಗೆ ಚರ್ಚೆ ನಡೆಸಿ ಜನರಿಗೆ ಏನು ಪ್ರಯೋಜನವಾಗುತ್ತದೆಯೋ ಆ ನಿರ್ಧಾರವನ್ನು ಕೈಗೊಳ್ಳುತ್ತೇವೆಂದು ತಿಳಿಸಿದರು.

ಸತೀಶ್ ಜಾರಕಿಹೊಳಿಯವರು ಸೊಸೈಟಿಯಲ್ಲಿನ ನೌಕರರನ್ನು ಖಾಯಂಗೊಳಿಸಲು ನೇಮಕಾತಿ ಆದೇಶಗಳನ್ನು ನೀಡಿದ್ದಾರೆ ಎಂದು ಸೊಸೈಟಿಯ ಮಾಜಿ ಅಧ್ಯಕ್ಷ ಕಲಗೌಡ ಪಾಟೀಲ್ ಮಾಡಿರುವ ಆರೋಪ ಕುರಿತು ಪ್ರತಿಕ್ರಿಯಿಸಿ, ನಾವು ನೇಮಕಾತಿ ಪತ್ರಗಳನ್ನು ವಿತರಿಸುವ ಅಗತ್ಯವಿಲ್ಲ. ಹಾಗೆ ಮಾಡುವ ಅಭ್ಯಾಸವೂ ನಮಗಿಲ್ಲ ಎಂದರು.

Minister Satish Jarkiholi
ಅಧಿಕಾರ ಹಂಚಿಕೆ ಇಲ್ಲವೆಂದು ಸಿಎಂ ಸ್ಪಷ್ಟನೆ: ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಿ- ಸಚಿವ ಸತೀಶ್ ಜಾರಕಿಹೊಳಿ

ಇದೇ ವೇಳೆ ಹುಕ್ಕೇರಿ ಕ್ಷೇತ್ರದಲ್ಲಿ ರ್ಯಾಲಿಗಳನ್ನು ನಡೆಸುವ ಕುರಿತ ಊಹಾಪೋಹಗಳನ್ನು ಜಾರಕಿಹೊಳಿಯವರು ತಳ್ಳಿಹಾಕಿದರು.

ರ್ಯಾಲಿಗಳಿಂದ ಯಾವುದೇ ಭರವಸೆ ಇಲ್ಲ. ನಾವು ಈಗಾಗಲೇ ಆ ಕ್ಷೇತ್ರದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರ ಒಗ್ಗೂಡಿಸಿದ್ದೇವೆ. ನಿನ್ನೆ ನಡೆದ ರ್ಯಾಲಿಯಲ್ಲಿ 2,000 ಜನರು ಭಾಗವಹಿಸಿದ್ದರು. ಜನರನ್ನು ಸಜ್ಜುಗೊಳಿಸುವುದು ನಮಗೆ ಹೊಸದೇನಲ್ಲ. ನಾನು ಕತ್ತಿ ಅವರಂತೆ ಆತುರದಲ್ಲಿಲ್ಲ. ನಾನು ಆಯುರ್ವೇದ ವೈದ್ಯನಂತೆ. ನಮ್ಮ ಶೈಲಿ ನಿಧಾನ ಮತ್ತು ಸೂಕ್ಷ್ಮವಾಗಿದೆ ಎಂದು ಟೀಕಿಸಿದರು.

ಜಾರಕಿಹೊಳಿ ಕುಟುಂಬವನ್ನು ಗುರಿಯಾಗಿಸಿಕೊಂಡು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿ ಮಠದಲ್ಲಿ ನಡೆದ ಲಿಂಗಾಯತ ನಾಯಕರ ಸಭೆ ಕುರಿತು ಪ್ರತಿಕ್ರಿಯಿಸಿ, ಈ ಸಭೆಗಳು ಕಳೆದ 20 ವರ್ಷಗಳಿಂದ ನಮ್ಮ ವಿರುದ್ಧ ನಡೆಯುತ್ತಿವೆ. ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸಲಿ, ನಾವು ನಮ್ಮ ಏಕತೆಯನ್ನು ಪ್ರದರ್ಶಿಸುತ್ತೇವೆ. ರಾಜಕೀಯದಲ್ಲಿ ಇದು ಸಾಮಾನ್ಯ. ಕನೇರಿ ಮಠದಲ್ಲಿ ನಡೆದ ಸಭೆಯ ಬಗ್ಗೆ ನನಗೆ ತಿಳಿದಿದೆ, ಆದರೆ, ಅದರಿಂದ ಯಾವುದೇ ಪರಿಣಾಮ ಬೀರಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com