ಹೊಸ ಜಾತಿ ಸಮೀಕ್ಷೆ ಗೊಂದಲ ಸೃಷ್ಟಿಸುವ, ಜನರ ಗಮನ ಬೇರೆಡೆ ಸೆಳೆಯುವ ಗುರಿ ಹೊಂದಿದೆ: ಬಿ.ವೈ ವಿಜಯೇಂದ್ರ

ಕಾಂಗ್ರೆಸ್ ಸರ್ಕಾರವು 'ಕೋಮು ವಿರೋಧಿ ವಿಶೇಷ ಕಾರ್ಯಪಡೆ'ಯನ್ನು ರಚಿಸುವ ಮೂಲಕ ಹಿಂದೂ ಮತ್ತು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಲು "ಪಿತೂರಿ" ನಡೆಸುತ್ತಿದೆ.
BY Vijayendra
ಬಿವೈ ವಿಜಯೇಂದ್ರ
Updated on

ಬೆಂಗಳೂರು: ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತದಿಂದ ಗೊಂದಲ ಸೃಷ್ಟಿಸುವ ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯುವ ಗುರಿಯೊಂದಿಗೆ ರಾಜ್ಯ ಸರ್ಕಾರ ಹೊಸದಾಗಿ ಜಾತಿ ಗಣತಿ ನಡೆಸುವ ನಿರ್ಧಾರ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶನಿವಾರ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರವು 'ಕೋಮು ವಿರೋಧಿ ವಿಶೇಷ ಕಾರ್ಯಪಡೆ'ಯನ್ನು ರಚಿಸುವ ಮೂಲಕ ಹಿಂದೂ ಮತ್ತು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಲು "ಪಿತೂರಿ" ನಡೆಸುತ್ತಿದೆ. ರಾಜ್ಯದಲ್ಲಿ ತನ್ನ ವೈಫಲ್ಯಗಳು ಮತ್ತು ಅಭಿವೃದ್ಧಿ ಕೊರತೆಯನ್ನು ಮುಚ್ಚಿಕೊಳ್ಳಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದೆ ಎಂದು ಟೀಕಿಸಿದರು.

'ಕಾಂತರಾಜು ಸಮಿತಿ ವರದಿಯನ್ನು (2015ರ ಜಾತಿ ಗಣತಿ ವರದಿ) ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು; ಅದರ ಕುರಿತು ಹಲವಾರು ಸಚಿವ ಸಂಪುಟ ಸಭೆಗಳು ನಡೆದವು, ಆದರೆ ಅದು ಜಾರಿಗೆ ಬರಲಿಲ್ಲ. ಜಾತಿ ಗಣತಿಯ ದತ್ತಾಂಶವು ಹತ್ತು ವರ್ಷಗಳಿಗಿಂತ ಹಳೆಯದಾಗಿದೆ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರು ಸೇರಿದಂತೆ ಒಳಗಿನಿಂದಲೇ ವಿರೋಧ ವ್ಯಕ್ತವಾದರೂ, ಅವರು (ಸಿಎಂ) ಅದಕ್ಕೆ ಜಾರಿಗೆ ತಂದೇ ತರುವುದಾಗಿ ಹೇಳಿದ್ದರು' ಎಂದು ವಿಜಯೇಂದ್ರ ಹೇಳಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜ್ಞಾನೋದಯ' ಪಡೆದಂತೆ ಸಿಎಂ ಈಗ ಹೊಸ ಸಮೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಜೂನ್ 4 ರಂದು ಆರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದಿಂದ ಹನ್ನೊಂದು ಜನರು ಸಾವಿಗೀಡಾದ ಘಟನೆಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

BY Vijayendra
ಜಾತಿ ಗಣತಿ ಮರು ಸಮೀಕ್ಷೆ: ಸಚಿವ ಸಂಪುಟ ಸಭೆ ಒಪ್ಪಿಗೆ

'ಅಂತಿಮವಾಗಿ, ಅವರು (ರಾಜ್ಯ ಸರ್ಕಾರ) ಈ ವಿಷಯದ ಬಗ್ಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಕೇಂದ್ರ ಸರ್ಕಾರವು ಮುಂದಿನ ಜನಗಣತಿಯಲ್ಲಿ ಜಾತಿ ಗಣತಿ ಮಾಡುವುದಾಗಿಯೂ ಘೋಷಿಸಿದೆ ಮತ್ತು ಅಂತಹ ಸಮೀಕ್ಷೆಯನ್ನು ಮಾಡುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ಎಂಬ ಅನುಮಾನಗಳಿವೆ. ಅವರು ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರವಾಗಲಿ ಅಥವಾ ಸಿದ್ದರಾಮಯ್ಯ ಆಗಲಿ ಇದನ್ನು ಪರಿಹರಿಸಲು ಉದ್ದೇಶಿಸಿಲ್ಲ' ಎಂದರು.

ತಾವು ಮತ್ತು ತಮ್ಮ ಪಕ್ಷದ ನಾಯಕರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ರಾಜ್ಯ ಸರ್ಕಾರ ರಚಿಸಿರುವುದು "ಕೋಮು ವಿರೋಧಿ ಕಾರ್ಯಪಡೆ" ಅಲ್ಲ, ಇದು ಹಿಂದೂಗಳು, ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕುವ ಪಿತೂರಿಯಾಗಿದೆ. ನಾವು ಅದಕ್ಕೆ ತಲೆಬಾಗುವುದಿಲ್ಲ. ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಪಿತೂರಿ ನಡೆಸುತ್ತಿದೆ. ಆದರೆ ನಾವು ಅದನ್ನು ಎದುರಿಸುತ್ತೇವೆ ಎಂದು ಹೇಳಿದರು.

ಕೋಮು ಘಟನೆಗಳನ್ನು ನಿಭಾಯಿಸಲು 'ಕೋಮು ವಿರೋಧಿ ಕಾರ್ಯಪಡೆ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಶೇಷ ಕ್ರಿಯಾ ಪಡೆ (SAF) ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯಾರಂಭ ಮಾಡಿತು.

BY Vijayendra
ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಿಸುವುದೇ ಹೊಸದಾಗಿ ಜಾತಿ ಗಣತಿ ಹಿಂದಿನ ಪಿತೂರಿ: ಶೋಭಾ ಕರಂದ್ಲಾಜೆ

ದೆಹಲಿಯಲ್ಲಿ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ, ಕರ್ನಾಟಕವು ತೆರಿಗೆಗೆ ನೀಡುವ ಪ್ರತಿ ರೂಪಾಯಿಗೆ ಕೇಂದ್ರದಿಂದ ಕೇವಲ 15 ಪೈಸೆ ಮಾತ್ರ ಪಡೆಯುತ್ತದೆ ಎಂಬ ಸಿಎಂ ಆರೋಪಕ್ಕೆ ವಿಜಯೇಂದ್ರ ವ್ಯಂಗ್ಯವಾಡಿದರು. ರಾಜ್ಯದ ಪರವಾಗಿ ಇಂತಹ ಸಭೆಗೆ ಹಾಜರಾಗುವ ಮೂಲಕ ಮತ್ತು ಸಮಸ್ಯೆಗಳನ್ನು ಚರ್ಚಿಸಿದ್ದಕ್ಕಾಗಿ ಸಿದ್ದರಾಮಯ್ಯ ಅವರನ್ನು ಮೊದಲು ಅಭಿನಂದಿಸಲು ಬಯಸುತ್ತೇನೆ ಎಂದು ಹೇಳಿದರು.

ನಿಮಗೆ ನೆನಪಿದ್ದರೆ, ಸಿಎಂ ಅಂತಹ ಸಭೆಗಳಿಗೆ ಹಾಜರಾಗದಿರುವ ಬಗ್ಗೆ ಮತ್ತು ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಕಾಂಗ್ರೆಸ್ ಪಕ್ಷಕ್ಕೋ ಎಂದು ಕೇಳಿ ಬಿಜೆಪಿ ಹಲವಾರು ಬಾರಿ ಪ್ರಶ್ನಿಸಿತ್ತು? ಅವರು ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದು ಸ್ವಾಗತಾರ್ಹ' ಎಂದು ಅವರು ಹೇಳಿದರು.

'ನಾನು ಅವರ ಬಗ್ಗೆ ವಿಷಾದಿಸುತ್ತೇನೆ, ಏಕೆಂದರೆ ಅವರು ಖಾತರಿ ಯೋಜನೆಗಳಿಗೆ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸಾಧ್ಯವಾಗುತ್ತಿಲ್ಲ ಮತ್ತು ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಆದ್ದರಿಂದ ಅವರು ಅರ್ಧ ಸತ್ಯವನ್ನು ಹೇಳುವ ಮೂಲಕ ಕೇಂದ್ರವನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯವು ಕೇಂದ್ರದ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರದ ಕಾರ್ಯಕ್ರಮಗಳನ್ನು ಕಡಿತಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com