ರಾಜ್ಯದ ಜನರ ಹಣ ಕೊಳ್ಳೆ ಹೊಡೆಯುತ್ತಿರುವ CM-DCM ಜನರ ಕಣ್ಣಿಗೆ ದೊಡ್ಡ 'ಪಿಕ್ ಪಾಕೆಟರ್'ನಂತೆ ಕಾಣುತ್ತಿದ್ದಾರೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ರಾಜ್ಯದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಜನರ ಕಣ್ಣಿಗೆ ದೊಡ್ಡ ಪಿಕ್ ಪಾಕೆಟರ್ನಂತೆ ಕಾಣುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಟೀಕೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಹೆಚ್ಚುವರಿ ಹಣ ಜನರಿಗೆ, ರೈತರಿಗೆ ವಿನಿಯೋಗವಾಗುತ್ತಿದೆ ಎ೦ದು ಪು೦ಖಾನುಪು೦ಖವಾಗಿ ಸಿಎಂ ಸುಳ್ಳು ಹೇಳಿದ್ದಾರೆ. ಜನರೆದುರು ಸುಳ್ಳು ಹೇಳಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಮಿಸ್ ಮ್ಯಾನೇಜೆಂಟ್ ನಿಂದಲೇ ದರ ಏರಿಕೆ ಆಗಿವೆ. ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಒಳ ಜಗಳದಿಂದ ರಾಜ್ಯವೇ ಹಾಳಾಗುತ್ತಿದೆ. ದೇಶದ ಭದ್ರತೆಯ ವಿಚಾರದಲ್ಲಿ ಬೇಕಾ ಬಿಟ್ಟಿ ಹೇಳಿಕೆ ನೀಡಿದ ಸಿದ್ದರಾಮಯ್ಯ ಅವರ ಬಗ್ಗೆ ಪಾಕಿಸ್ಥಾನದಲ್ಲಿ ಸಂಭ್ರಮಿಸಿದ್ದಾರೆ. ಇವರು ಪಾಕಿಸ್ಥಾನದ ಹೀರೋ ಆಗಿದ್ದಾರೆ. ರಾಜ್ಯದಲ್ಲಿ ಹಗಲು ದರೋಡೆ ಮಾಡುತ್ತಿರುವ ಕಾಂಗ್ರೆಸ್ನವರು ತಾವು ಸಾಚಾ ಎಂದು ಬಿಂಬಿಸಿಕೊಳ್ಳಲು ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಸಮಾವೇಶ ಮಾಡಿದ್ದಾರೆ. ರಾಜ್ಯದ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕಣ್ಣಿಗೆ ದೊಡ್ಡ ಪಿಕ್ ಪಾಕೆಟರ್ನಂತೆ ಕಾಣುತ್ತಿದ್ದಾರೆಂದು ಟೀಕಿಸಿದ್ದಾರೆ.
ಜಾತಿ ಗಣತಿ ಬಗ್ಗೆ ಮಾತನಾಡಿ, ಜಾತಿ ಗಣತಿ ಬಗ್ಗೆ ಈಗ ಮಾತನಾಡುವ ಕಾಂಗ್ರೆಸ್ 1951, 61, 71, 2011 ಹೀಗೆ ಜನಗಣತಿ ಮಾಡಿದೆ. ಜಾತಿ ಗಣತಿ ಯಾಕೆ ಮಾಡಲಿಲ್ಲ? ಮುಸ್ಲಿಮ್ ಸಮುದಾಯದಲ್ಲೂ ಅಸ್ಪೃಶ್ಯರು ಇದ್ದಾರೆ. ಅವರ ಗಣತಿ ಯಾಕೆ ಮಾಡಿಲ್ಲ? ಈಗ ರಾಹುಲ್ ಗಾಂಧಿಗೆ, ಕಾಂಗ್ರೆಸ್ ಹೋರಾಟಕ್ಕೆ ಹೆದರಿ ಜಾತಿ ಗಣತಿ ಮಾಡಲು ಕೇಂದ್ರ ನಿರ್ಧರಿಸಿದೆ ಎಂದು ಜನರಿಗೆ ಸುಳ್ಳು ಯಾಕೆ ಹೇಳುತ್ತಿದ್ದೀರಿ?
ಮುಸ್ಲಿಂ ಸಮುದಾಯದಲ್ಲೂ ಅಸ್ಪೃಶ್ಯರು ಇದ್ದಾರೆ. ಅವರ ಗಣತಿ ಯಾಕೆ ಮಾಡಿಲ್ಲ. ಅದನ್ನು ಪ್ರಶ್ನಿಸಿದರೆ ಸಿದ್ದರಾಮಯ್ಯ ತಾಳ್ಮೆಗೆಟ್ಟವರಂತೆ ವರ್ತಿಸುತ್ತಾರೆ. ಅಧಿಕಾರಕ್ಕಾಗಿ ಆಂತರಿಕ ಕಲಹ ಅತಿರೇಕದ ಪರಿಣಾಮ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡಿದ್ದಾರೆ. ಇಂತಹ ದಪ್ಪ ಚರ್ಮದ ಮುಖ್ಯಮಂತ್ರಿಗೆ ಏನು ಹೇಳಬೇಕು? ಎಂದು ಕಿಡಿಕಾರಿದ್ದಾರೆ.