ಬಿಡದಿ ಟೌನ್ ಶಿಪ್ ಯೋಜನೆ ಮೂಲಕ ಲೂಟಿ ಮಾಡಲು ಹೊರಟಿದೆ ರಾಜ್ಯ ಕಾಂಗ್ರೆಸ್: ಆರ್.ಅಶೋಕ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಶೇ. 70 ರಷ್ಟು ನಿವೇಶನಗಳು ಖಾಲಿ ಬಿದ್ದಿವೆ. ಹೀಗಿರುವಾಗ ಬಿಡದಿಗೆ ನಿವೇಶನ ಖರೀದಿಸಲು ಯಾರು ಬರುತ್ತಾರೆ, ಏಕೆಂದರೆ ಬೆಂಗಳೂರಿನಲ್ಲಿಯೇ ಬಿಡಿಎಗೆ ಯಾರೂ ಬರುವುದಿಲ್ಲ, 2 ಲಕ್ಷ ಫ್ಲಾಟ್‌ಗಳು ಖಾಲಿಯಾಗಿವೆ.
R. Ashoka
ವಿಪಕ್ಷ ನಾಯಕ ಆರ್.ಅಶೋಕ್
Updated on

ಬೆಂಗಳೂರು: ಬಿಡದಿಯಲ್ಲಿರುವ ಭೂಮಿ ನೀರಾವರಿ ಭೂಮಿಯಾಗಿದ್ದು, ಬಿಡದಿ ಟೌನ್ ಶಿಪ್ ಯೋಜನೆ ಮೂಲಕ ಸಿದ್ದರಾಮಯ್ಯ ಸರ್ಕಾರ ಇಲ್ಲಿನ 3,000 ಎಕರೆ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಶುಕ್ರವಾರ ಆರೋಪಿಸಿದ್ದಾರೆ.

ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಾಡುತ್ತಿರುವ ಭೂಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಿಂದಾಗಿ ಬೆಂಗಳೂರಿಗೆ ಹಾನಿಯಾಗಲಿದೆ. ನಗರದ ಸುತ್ತಮುತ್ತಲಿನ ಜಮೀನುಗಳ ಬೆಲೆ ಹೆಚ್ಚಿಸಲು ಈ ರೀತಿ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭೂಸ್ವಾಧೀನ ಎನ್ನುವುದೇ ದೊಡ್ಡ ಮಾರಿ ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಶೇ. 70 ರಷ್ಟು ನಿವೇಶನಗಳು ಖಾಲಿ ಬಿದ್ದಿವೆ. ಹೀಗಿರುವಾಗ ಬಿಡದಿಗೆ ನಿವೇಶನ ಖರೀದಿಸಲು ಯಾರು ಬರುತ್ತಾರೆ, ಏಕೆಂದರೆ ಬೆಂಗಳೂರಿನಲ್ಲಿಯೇ ಬಿಡಿಎಗೆ ಯಾರೂ ಬರುವುದಿಲ್ಲ, 2 ಲಕ್ಷ ಫ್ಲಾಟ್‌ಗಳು ಖಾಲಿಯಾಗಿವೆ. ಮನೆಗಳನ್ನು ನಿರ್ಮಿಸುವುದು ಅವರ ಕಾರ್ಯವಲ್ಲ, ಶಾಂತಿಯನ್ನು ಕದಡುವುದು. ಸರ್ಕಾರ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡುತ್ತಿದೆ. ಆದರೆ, ಅವರು 20 ವರ್ಷಗಳ ಹಿಂದೆಯೇ ಯೋಜನೆಯನ್ನು ಕೈಬಿಟ್ಟಿದ್ದರು. ನಾನು ಕಂದಾಯ ಸಚಿವನಾಗಿದ್ದೆ. ಆಗ ಎಂದೂ ನಾನು ಭೂಸ್ವಾಧೀನ ಮಾಡಲು ಬರಲಿಲ್ಲ. ರೈತರು ಬೇಡ ಎಂದಾಗಲೇ ಸ್ವಾಧೀನ ಕೈ ಬಿಡಲಾಗಿತ್ತು. ಕಾಂಗ್ರೆಸ್ ಎಂದರೆ ರಿಯಲ್ ಎಸ್ಟೇಟ್ ಸರಕಾರ ಎಂದು ಅವರು ಟೀಕಿಸಿದರು.

ಕುಮಾರಸ್ವಾಮಿ ಇಲ್ಲಿ ನಿವೇಶನಗಳನ್ನು ನಿರ್ಮಿಸಬೇಕಾಗಿದ್ದರೆ, 2018 ರಲ್ಲಿ ಅವರು ಮತ್ತೆ ಸಿಎಂ ಆದಾಗಲೇ ಅದನ್ನು ಮಾಡುತ್ತಿದ್ದರು. ಇದು ರೈತರ ಭೂಮಿ ಎಂದು ತಿಳಿದ ನಂತರ ಆ ಆಲೋಚನೆಯನ್ನು ಕೈಬಿಟ್ಟಿದ್ದರು. ಬಿಡದಿಯಲ್ಲಿ ಭೂಸ್ವಾಧೀನಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಉದ್ದೇಶ 'ಲೂಟಿ'ಯಷ್ಟೇ. ಸರ್ಕಾರ ರೈತ ವಿರೋಧಿ. ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದರೆ, ರೈತರು ಬೀದಿಗೆ ಬರುತ್ತಾರೆ. ಸುಮಾರು 10,000 ಎಕರೆ ಭೂಮಿಯನ್ನು ರೇಷ್ಮೆ ಕೃಷಿಗೆ ಬಳಸಲಾಗುತ್ತಿದೆ. ಯೋಜನೆ ಮೂಲಕ ಸರ್ಕಾರವು ರೇಷ್ಮೆ ನಗರ ರಾಮನಗರವನ್ನು ಒಮ್ಮೆಗೇ ಮುಗಿಸಲು ಬಯಸುತ್ತಿದೆ, ಆದ್ದರಿಂದ ಅವರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ಸರಕಾರ 2ಸಾವಿರ ರೂ. ನೀಡಿ ಮತ್ತೊಂದು ಕಡೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ಕಡೆ ಹಣ ನೀಡಿದರೆ ಮನೆಯ ಯಜಮಾನನಿಂದ ಸುಮಾರು 8ಸಾವಿರ ರೂ. ಲೂಟಿ ಮಾಡುತ್ತಿದ್ದಾರೆ. 3 ಸಾವಿರ ಎಕರೆ ಜಮೀನನ್ನು ಕೊಳ್ಳೆ ಹೊಡೆಯಲು ಬಿಡದಿ ಟೌನ್‍ಶಿಪ್ ಯೋಜನೆಯಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಸ್ವಾಧೀನ ಮಾಡಲಾಗುತ್ತದೆ. ದುಡ್ಡು ಮಾಡಲು ಈ ರೀತಿಯ ಯೋಜನೆ ತರಲಾಗಿದೆ ಎಂದು ಕಿಡಿಕಾರಿದರು.

R. Ashoka
ಟೌನ್ ಶಿಪ್ ಪಿತಾಮಹ ದೇವೇಗೌಡ-ಕುಮಾರಸ್ವಾಮಿ; ಯಾರು ಏನೇ ಹೇಳಿದ್ರು ಗ್ರೇಟರ್ ಬೆಂಗಳೂರು ಮಾಡುವುದು ಖಚಿತ: ಡಿ.ಕೆ ಶಿವಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com