ಮಲ್ಲಿಕಾರ್ಜುನ ಖರ್ಗೆ ಏನು ಗುಪ್ತಚರ ಇಲಾಖೆ‌ ಮುಖ್ಯಸ್ಥರಾಗಿದ್ದರಾ?: ಶ್ರೀರಾಮುಲು

ಖರ್ಗೆಯವರ ಹೇಳಿಕೆ ಹಾಸ್ಯಸ್ಪದವಾಗಿದೆ. ಅಂತಹ ಹಿರಿಯ ಹುದ್ದೆಯನ್ನು ಹೊಂದಿರುವ ಅವರು ಇಂತಹ ಆಧಾರರಹಿತ ಹೇಳಿಕೆಗಳನ್ನು ಹೇಗೆ ಮಾಡಲು ಸಾಧ್ಯ?
Sriramulu
ಬಿ ಶ್ರೀರಾಮುಲು
Updated on

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏನಾದರೂ ಗುಪ್ತಚರ ಇಲಾಖೆ‌ ಮುಖ್ಯಸ್ಥರಾಗಿದ್ದರಾ? ಭಯೋತ್ಪಾದಕ ದಾಳಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮೊದಲೇ ಗೊತ್ತಿದ್ದರೆ ಅವರನ್ನು ಕೆಡವಿ ಹಾಕಿ ಹೊಡೆಯುತ್ತಿದ್ದರು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬುಧವಾರ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆಯವರ ಹೇಳಿಕೆ ಹಾಸ್ಯಸ್ಪದವಾಗಿದೆ. ಅಂತಹ ಹಿರಿಯ ಹುದ್ದೆಯನ್ನು ಹೊಂದಿರುವ ಅವರು ಇಂತಹ ಆಧಾರರಹಿತ ಹೇಳಿಕೆಗಳನ್ನು ಹೇಗೆ ಮಾಡಲು ಸಾಧ್ಯ? ಉಗ್ರರ ದಾಳಿ ಬಗ್ಗೆ ಮೋದಿಯವರಿಗೆ ಮೊದಲೇ ಗೊತ್ತಿದ್ದರೆ ಸುಮ್ಮನೆ ಬಿಡುತ್ತಿದ್ದರೇ? ಕಾಂಗ್ರೆಸ್‌ನವರು ಏನು ಬೇಕಾದರು ಮಾತನಾಡುತ್ತಾರೆ. ಅವರ ನಾಲಿಗೆ ಮತ್ತು ತಲೆಗೆ‌ ಲಿಂಕ್ ಇಲ್ಲ. ನಮ್ಮ‌ ಸೈನಿಕರು ಪೆಹಲ್ಗಾಮ್ ದಾಳಿಕೋರರ ಅಡಗು ತಾಣಗಳನ್ನು ನಾಶ ಮಾಡಿದ್ದಾರೆ ಎಂದು ಹೇಳಿದರು.

ನಮ್ಮ ಸೇನಾಪಡೆಗಳು ಪ್ರತಿದಾಳಿ ಮಾಡಿದಾಗಲೆಲ್ಲಾ ಕಾಂಗ್ರೆಸ್ ನಾಯಕರು ಸಾಕ್ಷಿ ಕೇಳುತ್ತಾರೆ. ಆದರೆ ಈ ಬಾರಿ, ಪಾಕಿಸ್ತಾನದ ಪ್ರಧಾನಿ ಕೂಡ ಭಾರತೀಯ ಪಡೆಗಳು ಪಾಕಿಸ್ತಾನದ ನೆಲದಲ್ಲಿ ದಾಳಿ ನಡೆಸಿವೆ ಎಂದು ಒಪ್ಪಿಕೊಂಡಿದ್ದಾರೆ. ಮೋದಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಪ್ರತಿಪಾದಿಸಿದರು.

ಇದೇ ವೇಳೆ ಕಾಂಗ್ರೆಸ್ ಸಾಧನಾ ಸಮಾವೇಶವನ್ನು ಟೀಕಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶಕ್ತಿ ಪ್ರದರ್ಶನವಾಗಿ ಈ ರ್ಯಾಲಿಯನ್ನು ನಡೆಸಿದ್ದಾರೆಂದು ಆರೋಪಿಸಿದರು.

ಅಧಿಕಾರ ಕಳೆದುಕೊಳ್ಳುವ ಭಯ ಅವರ ಅಜಾಗರೂಕ ಹೇಳಿಕೆಗಳಲ್ಲಿ ಸ್ಪಷ್ಟವಾಗಿದೆ. ಅವರ ಕುರ್ಚಿ ಅಲುಗಾಡುತ್ತಿದೆ" ಎಂದು ಟೀಕಿಸಿದರು.

Sriramulu
ಕಾಶ್ಮೀರ ಪ್ರವಾಸ ರದ್ದುಗೊಳಿಸಿದ ಮೋದಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರೆ, 26 ಜೀವಗಳು ಉಳಿಯುತ್ತಿದ್ದವು: ಖರ್ಗೆ

ರಾಜ್ಯದಲ್ಲಿ ಆಡಳಿತ "ಕೋಮಾದಲ್ಲಿದೆ", ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು, ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆಗಳನ್ನು ಹೆಚ್ಚಿಸಿದೆ. ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಶಾಸಕರಿಗೆ ಹಣ ಸಿಗುತ್ತಿಲ್ಲ, ಎಲ್ಲಾ ಪ್ರಮುಖ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ನೀರಾವರಿ ಮತ್ತು ಕೃಷಿಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಬೆಂಗಳೂರಿನಲ್ಲಿ ಜನರು ನಿರಂತರ ಮಳೆಯಿಂದ ಬಳಲುತ್ತಿದ್ದಾರೆ, ಆದರೆ ಸರ್ಕಾರವು ಅಸಡ್ಡೆ ತೋರುತ್ತಿದೆ.

ಗುತ್ತಿಗೆದಾರರು ತಮ್ಮ ಬಾಕಿ ಹಣವನ್ನು ಪಡೆಯಲು ಶೇ.60 ಕಮಿಷನ್ ಪಾವತಿಸಲು ಒತ್ತಾಯಿಸಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ಹಿಂದೂಗಳು ಸುರಕ್ಷಿತವಾಗಿಲ್ಲ. ಇದು ಮಾಫಿಯಾ ಸರ್ಕಾರ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com