ಸಂಸತ್ ಸದಸ್ಯರಿಂದ ಇಂತಹ ಹೇಳಿಕೆ "ಸರಿಯಲ್ಲ": ಸುಧಾ ಮೂರ್ತಿ ನಿರ್ಧಾರಕ್ಕೆ ಪ್ರಿಯಾಂಕ್ ಖರ್ಗೆ ಬೇಸರ

ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ ಅವರು ನಾವು ಹಿಂದೂಳಿದವರಲ್ಲ ಎಂದು ಹೇಳುವ ಮೂಲಕ ಜಾತಿ ಗಣತಿ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಸಂಸತ್ ಸದಸ್ಯರೊಬ್ಬರು ಇಂತಹ ಹೇಳಿಕೆ ನೀಡುವುದು ಆಶ್ಚರ್ಯಕರವಾಗಿದೆ ಎಂದರು.
Priyank Kharge
ಸಚಿವ ಪ್ರಿಯಾಂಕ್ ಖರ್ಗೆ online desk
Updated on

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆಯಿಂದ ಹೊರಗುಳಿದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ ಅವರು ನಾವು ಹಿಂದೂಳಿದವರಲ್ಲ ಎಂದು ಹೇಳುವ ಮೂಲಕ ಜಾತಿ ಗಣತಿ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಸಂಸತ್ ಸದಸ್ಯರೊಬ್ಬರು ಇಂತಹ ಹೇಳಿಕೆ ನೀಡುವುದು ಆಶ್ಚರ್ಯಕರವಾಗಿದೆ ಎಂದರು.

ಪಕ್ಷದೊಂದಿಗಿನ ಮೂರ್ತಿ ಅವರ ಸಂಬಂಧವನ್ನು ಗಮನಿಸಿದರೆ ಅವರ ನಿರ್ಧಾರವು ಬಿಜೆಪಿ ನಾಯಕರಿಂದ ಪ್ರಭಾವಿತವಾಗಿದೆಯೇ? ಎಂದು ಅವರು ಪ್ರಶ್ನಿಸಿದರು. ಭಾಗವಹಿಸುವಿಕೆ ಸ್ವಯಂಪ್ರೇರಿತವಾಗಿದ್ದರೂ, ಭಾಗವಹಿಸಲು ಸಂಪೂರ್ಣವಾಗಿ ನಿರಾಕರಿಸುವುದು ಸರಿಯಾದ ವಿಧಾನವಲ್ಲ ಎಂದು ಖರ್ಗೆ ಒತ್ತಿ ಹೇಳಿದರು.

Priyank Kharge
'ಜಾತಿ ಗಣತಿಯಲ್ಲಿ ಭಾಗವಹಿಸದಿರುವ ಸುಧಾ ಮೂರ್ತಿ ಆಯ್ಕೆಯನ್ನು ಗೌರವಿಸುತ್ತೇನೆ'

ಪ್ರಹ್ಲಾದ್ ಜೋಶಿ, ''ಸುಧಾಮೂರ್ತಿ, ತೇಜಸ್ವಿ ಸೂರ್ಯ ಹೇಳುವುದು ನೋಡಿದರೆ, ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಗೊತ್ತಾಗುತ್ತಿದೆ. ಸುಧಾ ಮೂರ್ತಿಯವರ ಬಗ್ಗೆ ನನಗೆ ಬಹಳ‌ ಗೌರವವಿದೆ. ಆದರೆ, ಅವರ ಮನಸ್ಥಿತಿ ನೋಡಿದರೆ ನನಗೆ ಬಹಳ ಬೇಸರ ಆಗುತ್ತದೆ. ನೀವು ಹಿಂದುಳಿದಿಲ್ಲ ಸರಿ. ಆದರೆ ಮಾಹಿತಿಯನ್ನು ಕೊಡಿ. ನಿಮ್ಮ ವೈಯಕ್ತಿಕ ವಿಚಾರ ಕೇಳುತ್ತಿಲ್ಲ. ಕೊಡಲೇಬೇಕು ಅಂತ ನಾವು ಕೇಳಲ್ಲ'' ಎಂದರು.

"ಜಾತಿ ಗಣತಿಯು ಸರ್ಕಾರದ ಉಪಕ್ರಮವಾಗಿದೆ ಮತ್ತು ಮೊದಲನೆಯದಾಗಿ, ಇದು ಹೆಚ್ಚುವರಿ ಮಾಹಿತಿಯ ಸಂಪತ್ತನ್ನು ಒಳಗೊಂಡಿರುವ ಸಮೀಕ್ಷೆಯಾಗಿದೆ. ಹೀಗಾಗಿ ನಾನು ಸರ್ಕಾರಿ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುವುದು ಸರಿಯಲ್ಲ. ನೀವು ಹೆಚ್ಚೆಂದರೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಬಹುದಿತ್ತು" ಎಂದಿದ್ದಾರೆ.

'ಸುಧಾಮೂರ್ತಿ ಅವರು ಮಾಡಿದ್ದು ತಪ್ಪು. ಅವರು ಪಾಲ್ಗೊಂಡಿದ್ದರೆ ಚೆನ್ನಾಗಿತ್ತು. ಅವರು ಹಿಂಬರಹ ಹಾಗೆ ಕೊಟ್ಟಿರುವುದು ತಪ್ಪು. ಎಲ್ಲರೂ ಸುಧಾಮೂರ್ತಿಯವರನ್ನು ಪ್ರೇರಣೆ ರೀತಿಯಲ್ಲಿ ನೋಡುತ್ತಾರೆ. ಮುಂದೆ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತದೆ. ಆವಾಗಲೂ ಈ ರೀತಿ ಹಿಂಬರಹ ಕೊಡುತ್ತಾರಾ? ಎಂದು ಪ್ರಶ್ನಿಸಿದರು.

"ಸಮೀಕ್ಷೆಯು ಕರ್ನಾಟಕದ ಜನರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಮಾತ್ರ. ನಾವು ಎಲ್ಲರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಬಯಸುತ್ತೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com