ಸ್ಥಳೀಯ ಚುನಾವಣೆಗೂ ಮುನ್ನ JDS ಪುನರುಜ್ಜೀವನ: ಕಾರ್ಯತಂತ್ರ ರೂಪಿಸಲು ಪಕ್ಷದ ನಾಯಕರೊಂದಿಗೆ HDK ಸಭೆ

ಜೆಡಿಎಸ್ ಸದ್ಯ 19 ಶಾಸಕರು ಮತ್ತು 8 ಎಂಎಲ್ಸಿಗಳನ್ನು ಹೊಂದಿದೆ. ಏಕೈಕ ಲೋಕಸಭಾ ಸದಸ್ಯ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿದ್ದಾರೆ.
HD kumaraswamy
ಎಚ್.ಡಿ. ಕುಮಾರಸ್ವಾಮಿ
Updated on

ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮುಂದಿನ ಕೆಲವು ದಿನಗಳಲ್ಲಿ ಪಕ್ಷದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಜೆಡಿಎಸ್ ಸದ್ಯ 19 ಶಾಸಕರು ಮತ್ತು 8 ಎಂಎಲ್ಸಿಗಳನ್ನು ಹೊಂದಿದೆ. ಏಕೈಕ ಲೋಕಸಭಾ ಸದಸ್ಯ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿದ್ದಾರೆ.

ಕೇರಳದಲ್ಲಿ ಪಕ್ಷವು ಸ್ವಲ್ಪ ಮಟ್ಟಿಗೆ ಅಸ್ತಿತ್ವ ಹೊಂದಿದೆ. ಒಬ್ಬ ಸಚಿವ ಮತ್ತು ಮೂವರು ಶಾಸಕರಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆಗಳು ಹಾಗೂ 2028 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಜೆಡಿಎಸ್ ಪಕ್ಷ ಬಲಪಡಿಸುವುದು ಕುಮಾರಸ್ವಾಮಿಯವರ ಪ್ರಮುಖ ಅಜೆಂಡಾವಾಗಿದೆ. ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕವಾಗಿದೆ.

ನಾವು ಒಂದು ಪಕ್ಷವಾಗಿ ಪುನರುಜ್ಜೀವನಗೊಳ್ಳುತ್ತಿದ್ದೇವೆ. ಪರಿಷತ್ತಿನ ನಾಲ್ಕು ಸ್ಥಾನಗಳಿಗಾಗಿ ಮುಂಬರುವ ಚುನಾವಣೆಯಲ್ಲಿ ನಾವು ಬಿಜೆಪಿಯೊಂದಿಗೆ ಕಾರ್ಯತಂತ್ರ ರೂಪಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಾವು ಅವರೊಂದಿಗೆ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

HD kumaraswamy
ದುರಹಂಕಾರದಿಂದ ಆಕಾಶದಲ್ಲಿ ತೇಲುತ್ತಿರುವ ಸರ್ಕಾರ ಕೆಳಗೆ ಇಳಿದು ಜನರ ಕಷ್ಟ ಅರಿತುಕೊಳ್ಳಲಿ: ಎಚ್.ಡಿ ಕುಮಾರಸ್ವಾಮಿ

ಹಾಸನ ಮತ್ತು ಮಂಡ್ಯದಂತಹ ಸವಾಲುಗಳಿರುವ ಪ್ರಮುಖ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಪಕ್ಷ ಮುನ್ನಡೆಸುತ್ತಿದ್ದಾರೆ. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ಒಮ್ಮೆ ಪ್ರಾಬಲ್ಯ ಸಾಧಿಸಿದ ಜೆಡಿಎಸ್, ಈ ಪ್ರದೇಶಗಳಲ್ಲಿ ಕಳೆದುಹೋದ ಅಸ್ತಿತ್ವ ಮರಳಿ ಪಡೆಯಲು ಪ್ರಯತ್ನಿಸುತ್ತದೆ.

2028 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ತ್ರಿಕೋನ ಸ್ಪರ್ಧೆಯಲ್ಲಿ ಜಯಗಳಿಸಿದ್ದರ ಹೊರತಾಗಿಯೂ, ಪಕ್ಷವು ತನ್ನ ಪ್ರಸ್ತುತ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಭರವಸೆ ನೀಡಬೇಕಾಗಿದೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ನೆಲೆ ಪಡೆಯುತ್ತಿರುವಂತೆ, ಕೆಲವರು "ಜೆಡಿಎಸ್ ಕೋಟೆ ಕುಗ್ಗುತ್ತಿದೆ ಎಂದು ಹೇಳಲಾಗುತ್ತಿದೆ. ಹಗರಣಗಳು ಮತ್ತು ಪ್ರಮುಖ ನಾಯಕರು ಇತರ ಪಕ್ಷಗಳಿಗೆ ಪಕ್ಷಾಂತರ ಸೇರಿದಂತೆ ಹಲವು ಹಿನ್ನಡೆಗಳು ಪಕ್ಷದ ಮೇಲೆ ಪರಿಣಾಮ ಬೀರಿದೆ.

ಕಾರ್ಯಕರ್ತರನ್ನು ಹುರಿದುಂಬಿಸಲು, ನೆಲೆಯನ್ನು ಭದ್ರಗೊಳಿಸಲು ಮತ್ತು ವಿರೋಧಿಗಳಿಗೆ ಸಂದೇಶವನ್ನು ಕಳುಹಿಸಲು ಈ ಪುನರುಜ್ಜೀವನ ಒಂದು ಪ್ರಯತ್ನವಾಗಿದೆ. ಜೆಡಿಎಸ್ ತನ್ನ ಕಳೆದುಹೋದ ನೆಲೆಯನ್ನು ಮರಳಿ ಪಡೆಯಲು ತೀವ್ರವಾಗಿ ಹೋರಾಡುತ್ತಿದೆ. ಜೆಡಿಎಸ್‌ಗೆ, ಇದು ಇನ್ನು ಮುಂದೆ ಚುನಾವಣೆಗಳನ್ನು ಗೆಲ್ಲುವುದರ ಬಗ್ಗೆ ಅಲ್ಲ ರಾಜಕೀಯವಾಗಿ ತನ್ನ ಪ್ರಾಬಲ್ಯ ಸಾಬೀತುಪಡಿಸುವುದು ಪ್ರಮುಖ ಅಂಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com