ರಂಗೇರಿದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಣ; ಬಿಸಿಲಿನ ತಾಪಕ್ಕೆ ಹೆಚ್ಚುತ್ತಿವೆ ಬಿಜೆಪಿ-ಕಾಂಗ್ರೆಸ್ ಟೀಕೆ-ಟಿಪ್ಪಣಿಗಳು

ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕೂಡ, ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭಯದಿಂದ ಮುಖ್ಯಮಂತ್ರಿಗಳು ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಟೀಕಿಸಿದರು.
Representational image
ಸಾಂದರ್ಭಿಕ ಚಿತ್ರ
Updated on

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು ಪ್ರತಿಷ್ಠೆಯ ಜೊತೆಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಕಾಳಗವಾಗಿ ಮಾರ್ಪಟ್ಟಿವೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಾಗಲಕೋಟೆಯಲ್ಲಿ ಮನೆಮನೆಗೆ ಪ್ರಚಾರ ನಡೆಸುವ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10-15 ಸಚಿವರೊಂದಿಗೆ ಕ್ಷೇತ್ರದಲ್ಲಿ ಠಿಕಾಣಿ ಹೂಡಿದರೂ ಅವರ ‘ಸೂಟ್‌ಕೇಸ್’ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.

ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕೂಡ, ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭಯದಿಂದ ಮುಖ್ಯಮಂತ್ರಿಗಳು ಐದು ದಿನಗಳ ಕಾಲ ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಹೇಳಿದರು. ಪ್ರತಿ ಗ್ರಾಮದಲ್ಲೂ 5 ಲಕ್ಷದಿಂದ 10 ಲಕ್ಷ ರೂಪಾಯಿ ಹಂಚುವಲ್ಲಿ ಅವರು ತೊಡಗಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಮತದಾರರ ಪಟ್ಟಿಯ ದುರುಪಯೋಗ ಮತ್ತು ಚುನಾವಣಾ ಆಯೋಗದ ದುರುಪಯೋಗದ ಆರೋಪ ಎದುರಿಸುತ್ತಿರುವ ಏಕೈಕ ಪ್ರಧಾನಮಂತ್ರಿ ಅವರು ಎಂದು ಹೇಳಿದರು.

Representational image
ದಾವಣಗೆರೆ-ಬಾಗಲಕೋಟೆ ಉಪಚುನಾವಣೆ: ಹೈಕಮಾಂಡ್ ಸೂಚನೆಗೆ ತಲೆಬಾಗಿದ ಜಮೀರ್; ಅಸಮಾಧಾನ ಮರೆತು ಪ್ರಚಾರಕ್ಕಿಳಿಯಲು ಮುಂದು..!

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಗಲಕೋಟೆಯಲ್ಲಿ ಮತ ಕಳವು ನಡೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಆರೋಪಿಸಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಬೆದರಿಕೆ ನೀಡಿ, ಎರಡನೇ ಮತದಾರರ ಗುರುತಿನ ಚೀಟಿ (Duplicate) ಮಾಡಿಸಲು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಈಗ ಎರಡು ಮತದಾರರ ಗುರುತಿನ ಚೀಟಿಗಳು ಇವೆ. ತಮ್ಮ ಊರಿನಲ್ಲಿ ಮಾಡಿಸಿದ ಚೀಟಿಯನ್ನು ಉಳಿಸಿಕೊಂಡು, ಇನ್ನೊಂದನ್ನು ಸಲ್ಲಿಸಲು ನಾನು ಮನವಿ ಮಾಡುತ್ತೇನೆ. ಇಂತಹ ಅಕ್ರಮಗಳನ್ನು ಪರಿಶೀಲಿಸಲು ನಾವು ಈಗಾಗಲೇ ಒಂದು ತಂಡವನ್ನು ನಿಯೋಜಿಸಿದ್ದೇವೆ. ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

Representational image
ಗ್ಯಾರಂಟಿ ಯೋಜನೆ ನಿಲ್ಲಲ್ಲ, ಸುಳ್ಳು ಪ್ರಚಾರ ನಡೆಸಿದರೂ ಜನರಲ್ಲಿ ಕಾಂಗ್ರೆಸ್ ಮೇಲಿನ ನಂಬಿಕೆ ಹೋಗಿಲ್ಲ: BJP ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ರಾಜಕೀಯ ಪಕ್ಷಗಳು ಆರೋಪಗಳನ್ನು ಮಾಡುತ್ತಿದ್ದರೂ, ಚುನಾವಣಾ ಆಯೋಗಕ್ಕೆ ನೇರವಾಗಿ ದೂರು ನೀಡುವುದನ್ನು ತಪ್ಪಿಸುತ್ತಿರುವ ನಡುವೆಯೇ, ಕಳೆದ 10 ದಿನಗಳಲ್ಲಿ ಆಯೋಗವು 1.3 ಕೋಟಿ ರೂಪಾಯಿ ನಗದು ಮತ್ತು 25 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ. 17 ವಾಹನಗಳನ್ನು ಜಪ್ತಿ ಮಾಡಿದ್ದು, 55 ಎಫ್‌ಐಆರ್‌ಗಳನ್ನು ದಾಖಲಿಸಿದೆ.

ಅಬಕಾರಿ ಇಲಾಖೆಯು 27 ಗಂಭೀರ ಪ್ರಕರಣಗಳು, ಪರವಾನಗಿ ಷರತ್ತು ಉಲ್ಲಂಘನೆಗೆ 30 ಪ್ರಕರಣಗಳು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಸೆಕ್ಷನ್ 15(ಎ) ಅಡಿಯಲ್ಲಿ ಪರವಾನಗಿ ಇಲ್ಲದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಸಂಬಂಧಿಸಿದಂತೆ 154 ಪ್ರಕರಣಗಳನ್ನು ದಾಖಲಿಸಿದೆ.

ಚುನಾವಣಾ ಆಯೋಗವು ಬಾಗಲಕೋಟೆಯಲ್ಲಿ 60 ಫ್ಲೈಯಿಂಗ್ ಸ್ಕ್ವಾಡ್‌ಗಳು, 72 ಸ್ಥಿರ ನಿಗಾವಳಿ ತಂಡಗಳು, 22 ವೀಡಿಯೊ ನಿಗಾವಳಿ ತಂಡಗಳು, 24 ಸೆಕ್ಟರ್ ಅಧಿಕಾರಿಗಳು ಮತ್ತು ವೆಚ್ಚ ಮೇಲ್ವಿಚಾರಕನನ್ನು ನಿಯೋಜಿಸಿ, 24 ತಪಾಸಣಾ ನಿಲ್ದಾಣಗಳನ್ನು ನಿಯೋಜಿಸಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 24 ಫ್ಲೈಯಿಂಗ್ ಸ್ಕ್ವಾಡ್‌ಗಳು, 33 ನಿಗಾವಳಿ ತಂಡಗಳು, 2 ವೀಡಿಯೊ ನಿಗಾವಳಿ ತಂಡಗಳು, 27 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿ, 11 ತಪಾಸಣಾ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com