ಶಾಮನೂರು' ಭದ್ರಕೋಟೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಲ ಪ್ರದರ್ಶನವೋ? 'ಸಮರ್ಥ್' ಸಾಮರ್ಥ್ಯ ದರ್ಶನವೋ?

ಸಮರ್ಥ್ ಅವರ ತಾತ ದಿವಂಗತ ಶಾಮನೂರು ಶಿವಶಂಕರಪ್ಪ ಸತತ ಆರು ಬಾರಿ ಗೆದ್ದಿರುವುದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಬಿಜೆಪಿ ಈ ಕ್ಷೇತ್ರದಲ್ಲಿ ಎಂದಿಗೂ ಯಶಸ್ಸನ್ನು ಕಂಡಿಲ್ಲ
ಸಮರ್ಥ್ ಶಾಮನೂರು ಮತ್ತು ದಾಸ ಕರಿಯಪ್ಪ
ಸಮರ್ಥ್ ಶಾಮನೂರು ಮತ್ತು ದಾಸ ಕರಿಯಪ್ಪ
Updated on

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗುರುವಾರ ಮತದಾನ ಆರಂಭವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ಮತ್ತು ಎಸ್‌ಟಿ ಸಮುದಾಯದ ಪ್ರತಿನಿಧಿ ಬಿಜೆಪಿಯ ಶ್ರೀನಿವಾಸ್ ಟಿ ದಾಸಕರಿಯಪ್ಪ ಕಣಕ್ಕಿಳಿದಿದ್ದಾರೆ.

ಸಮರ್ಥ್ ಅವರ ತಾತ ದಿವಂಗತ ಶಾಮನೂರು ಶಿವಶಂಕರಪ್ಪ ಸತತ ಆರು ಬಾರಿ ಗೆದ್ದಿರುವುದರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಬಿಜೆಪಿ ಈ ಕ್ಷೇತ್ರದಲ್ಲಿ ಎಂದಿಗೂ ಯಶಸ್ಸನ್ನು ಕಂಡಿಲ್ಲ. ಬಿಜೆಪಿ ನಾಯಕತ್ವವು ಅಲ್ಪಸಂಖ್ಯಾತ ಸಮುದಾಯದ ಮತಗಳ ವಿಭಜನೆಯೊಂದಿಗೆ ಒಬಿಸಿ ಮತ್ತು ಮುಂದುವರಿದ ಸಮುದಾಯದ ಮತಗಳ ಬೆಂಬಲ ಎದುರು ನೋಡುತ್ತಿದೆ. ವೀರಶೈವ ಲಿಂಗಾಯತರು, ಒಬಿಸಿಗಳು, ಎಸ್‌ಸಿಗಳು ಮತ್ತು ಅಲ್ಪಸಂಖ್ಯಾತ ಮತಗಳ ಬಹುಪಾಲು ಭಾಗದ ಬೆಂಬಲದ ಮೇಲೆ ಕಾಂಗ್ರೆಸ್‌ನ ಭರವಸೆ ಕೇಂದ್ರೀಕೃತವಾಗಿದೆ.

ದಾವಣಗೆರೆ ಉತ್ತರದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಬಿಜೆಪಿಯ ದಾಸ ಕರಿಯಪ್ಪ ಅವರಿಗೆ, ಈ ಸ್ಪರ್ಧೆಯು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಒಂದು ಅವಕಾಶವಾಗಿದೆ. ಚುನಾವಣಾ ಕಣದಲ್ಲಿ ಕುಟುಂಬವು ಸಮರ್ಥ್ ಅವರ ದೊಡ್ಡ ಶಕ್ತಿಯಾಗಿದೆ. ಅವರ ತಂದೆ ಎಸ್.ಎಸ್. ಮಲ್ಲಿಕಾರ್ಜುನ್, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರ ತಾಯಿ, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಂದಲೂ ಬೆಂಬಲ ವ್ಯಕ್ತವಾಗಿದೆ. ಸಮರ್ಥ್ ಈ ಹಿಂದೆ 2023 ರಲ್ಲಿ ತಮ್ಮ ತಾತ, ತಂದೆ ಮತ್ತು 2024 ರಲ್ಲಿ ತಮ್ಮ ತಾಯಿಯ ಜೊತೆ ಚುನಾವಣೆಗಳನ್ನು ನಿರ್ವಹಿಸಿದ್ದರು.

ಸಮರ್ಥ್ ಅವರ ಕುಟುಂಬವು ಎಸ್.ಎಸ್. ಕೇರ್ ಟ್ರಸ್ಟ್, ಎಸ್.ಎಸ್. ಜನಕಲ್ಯಾಣ ನಿಧಿ, ಹಳೆಯ ದಾವಣಗೆರೆಯ ಬಾಪೂಜಿ ಜನರಲ್ ಆಸ್ಪತ್ರೆಯ ಮೂಲಕ ಹಲವಾರು ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಜೊತೆಗೆ ಕೋವಿಡ್ -19 ಅವಧಿಯಲ್ಲಿ ಉಚಿತ ಲಸಿಕೆ ಮತ್ತು ಚಿಕಿತ್ಸೆಗಳನ್ನು ನೀಡಿದೆ.

ಸಮರ್ಥ್ ಶಾಮನೂರು ಮತ್ತು ದಾಸ ಕರಿಯಪ್ಪ
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ; Muslim ಶಾಸಕರ ಮನವೊಲಿಕೆಗೂ ಜಗ್ಗದ ಸಾದಿಕ್ ಪೈಲ್ವಾನ್!

ಕಾಂಗ್ರೆಸ್ ಅಲ್ಪಸಂಖ್ಯಾತ ಮತದಾರರಿಂದ ಹೆಚ್ಚಿನ ಸಂಖ್ಯೆಯ ಬೆಂಬಲವನ್ನು ನಿರೀಕ್ಷಿಸುತ್ತಿದೆ. ವೀರಶೈವ ಲಿಂಗಾಯತ ಮತದಾರರೊಂದಿಗೆ ಸಮರ್ಥ್ ಅವರ ಆಧ್ಯಾತ್ಮಿಕ ಸಂಪರ್ಕವು ಅವರ ಪರವಾಗಿ ಕೆಲಸ ಮಾಡುವ ನಿರೀಕ್ಷೆಯಿದೆ.

ವಂಶಪಾರಂಪರ್ಯ ರಾಜಕೀಯವು ಅವರ ನಿರೀಕ್ಷೆಗಳಿಗೆ ಅಡ್ಡಿಯಾಗಬಹುದು ಮತ್ತು ಅಲ್ಪಸಂಖ್ಯಾತ ಮತ್ತು ಒಬಿಸಿ ಮತದಾರರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ರಾಜಕೀಯ ಅನನುಭವವು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಬಹುದು ಎಂದು ಅವರು ಗಮನಸೆಳೆದಿದ್ದಾರೆ. ದಾಸಕರಿಯಪ್ಪ ಅವರಿಗೆ ಒಬಿಸಿ ಮತ್ತು ಮುಂದುವರಿದ ಸಮುದಾಯಗಳಲ್ಲಿ ಬಿಜೆಪಿಯ ಹೆಚ್ಚುತ್ತಿರುವ ಮತಗಳ ನೆಲೆಯಿಂದ ಲಾಭವಾಗುವ ಸಾಧ್ಯತೆಯಿದೆ.

ಸ್ವಾಭಿಮಾನಿ ವೇದಿಕೆ ದಾಸಕರಿಯಪ್ಪ ಅವರಿಗೆ ಬೆಂಬಲ ಘೋಷಿಸಿದೆ. ಪಕ್ಷದ ಜಿಲ್ಲಾ ಘಟಕದಲ್ಲಿನ ಬಂಡಾಯವನ್ನು ನಿವಾರಿಸುವಲ್ಲಿ ಬಿಜೆಪಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆ ಮತ್ತು ಹಿಂದೂ ಮತಗಳ ಧ್ರುವೀಕರಣದ ಸಾಧ್ಯತೆಯನ್ನು ಬಿಜೆಪಿ ನಂಬಿದೆ. ಎಸ್‌ಟಿ ಮತದಾರರ ಬೆಂಬಲವನ್ನು ಪಡೆಯಲು ಬಿಜೆಪಿ ಸಹ ಆಶಿಸಿದೆ.

ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತ ಮತದಾರರ ಉಪಸ್ಥಿತಿಯು ಬಿಜೆಪಿ ವಿರುದ್ಧ ಕೆಲಸ ಮಾಡಬಹುದು ಎಂದು ವೀಕ್ಷಕರು ಹೇಳುತ್ತಾರೆ. ವೀರಶೈವ-ಲಿಂಗಾಯತ ಮತದಾರರನ್ನು ಗೆಲ್ಲುವುದು ದೊಡ್ಡ ಕೆಲಸ ಎಂದು ಅವರು ಹೇಳಿದ್ದಾರೆ. ಪಕ್ಷದೊಳಗಿನ ಗುಂಪುಗಾರಿಕೆಯನ್ನು ಬಿಜೆಪಿ ಜಯಿಸಬೇಕಾಗಿದೆ ಮತ್ತು ಎಸ್‌ಸಿ ಮತಗಳ ಅಸ್ಥಿರ ಸ್ವಭಾವವು ದಾಸಕರಿಯಪ್ಪಗೆ ಮತ್ತೊಂದು ಸವಾಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com