ಬಿಎಂಸಿ ಚುನಾವಣೆಯಲ್ಲಿ ಸುಲಭವಾಗಿ ಅಳಿಸಬಹುದಾದ ಶಾಯಿ: 'ವೋಟ್ ಚೋರಿ'ಯ ಮತ್ತೊಂದು ಮುಖ - ಸಿಎಂ ಸಿದ್ದರಾಮಯ್ಯ

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (BMC) ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ಏಜೆಂಟ್‌ಗಳಿಂದ ಕೈ ಬೆರಳಿಗೆ ಹಾಕುವ ಶಾಯಿಯನ್ನು ಸುಲಭವಾಗಿ ಅಳಿಸಿಹಾಕುವುದನ್ನು ತೋರಿಸುತ್ತವೆ.
ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ
ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ
Updated on

ಬೆಂಗಳೂರು: ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (BMC) ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ಏಜೆಂಟ್‌ಗಳಿಂದ ಕೈ ಬೆರಳಿಗೆ ಹಾಕುವ ಶಾಯಿಯನ್ನು ಸುಲಭವಾಗಿ ಅಳಿಸಿಹಾಕುವುದನ್ನು ತೋರಿಸುತ್ತವೆ. ಇದು ಚುನಾವಣಾ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ಮಹಾರಾಷ್ಟ್ರ ಮತ್ತು ಅದರಾಚೆಗೂ ಕಳವಳಗಳು ಪ್ರತಿಧ್ವನಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಯೊಂದು ಮತವೂ ಪವಿತ್ರವಾಗಿದ್ದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಅದರ ಎಲೆಟೋರಲ್ ಸುರಕ್ಷತೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಒಂಬತ್ತು ವರ್ಷಗಳ ನಂತರ ಗುರುವಾರ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಚುನಾವಣೆ ನಡೆದಿತ್ತು. 227 ವಾರ್ಡ್‌ಗಳ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಿಎಂಸಿ ಚುನಾವಣೆಯಲ್ಲಿ ಮುಂದಿದೆ.

ಬಿಎಂಸಿ ಚುನಾವಣೆ ಬೆನ್ನಲ್ಲೇ ಮಾಧ್ಯಮ ವರದಿಗಳು ಮತ್ತು ವೈರಲ್ ಆದ ಸಾಮಾಜಿಕ ಮಾಧ್ಯಮ ವೀಡಿಯೊಗಳು ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ಏಜೆಂಟ್‌ಗಳಿಂದ ಅಳಿಸಲಾಗದ ಶಾಯಿಯನ್ನು ಸುಲಭವಾಗಿ ಅಳಿಸಿಹಾಕುವುದನ್ನು ತೋರಿಸುತ್ತವೆ. ಇದು ಚುನಾವಣಾ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ. ಮಹಾರಾಷ್ಟ್ರ ಮತ್ತು ಅದರಾಚೆಗೆ ಕಳವಳಗಳು ಪ್ರತಿಧ್ವನಿಸುತ್ತವೆ ಎಂದು ಸಿದ್ದರಾಮಯ್ಯ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ
BMC Election: ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ಗೆ ಪ್ರಚಂಡ ಗೆಲುವು!

ಇದು ಪ್ರತ್ಯೇಕ ದೋಷವಲ್ಲ. ಇದು 'ವೋಟ್ ಚೋರಿ'ಯಲ್ಲಿ ಮತ್ತೊಂದು ಅಧ್ಯಾಯ. ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆ ನಾಶವಾಗುತ್ತದೆ. ಮೂಲಭೂತ ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುವುದು ಮತ್ತು ನಾಗರಿಕರ ಕಾಳಜಿಗಳನ್ನು ತಳ್ಳಿಹಾಕುವುದು ಪ್ರಜಾಪ್ರಭುತ್ವವನ್ನು ರಕ್ಷಿಸುವುದಿಲ್ಲ. ಅದು ಮತ್ತಷ್ಟು ಹಾನಿಗೊಳಿಸುತ್ತದೆ. ಚುನಾವಣಾ ಆಯೋಗವು ಈಗ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸರಿಪಡಿಸುವ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ವೋಟ್ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರಚಾರ ಮಾಡುತ್ತಿದೆ.

ಸಿದ್ದರಾಮಯ್ಯ ಬಲಗೈ ಬೆರಳಿಗೆ ಶಾಯಿ
'ವೋಟ್ ಚೋರಿ ದೇಶ ವಿರೋಧಿ ಕೃತ್ಯ': ಅಳಿಸಬಹುದಾದ ಶಾಯಿ ವಿವಾದದ ಬಗ್ಗೆ ರಾಹುಲ್ ಗಾಂಧಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com