

ವಿಜಯಪುರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಾಯಕರು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ, ಆದರೆ ಏನೇ ತೀರ್ಮಾನವಾಗುವುದಿದ್ದರೂ ಹೈಕಮಾಂಡ್ ಗೆ ಬಿಟ್ಟಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಚಿವ ಎನ್ ಎಸ್ ಬೋಸರಾಜು ಹೇಳಿದ್ದಾರೆ.
ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು 55 ವರ್ಷಗಳಿಂದ ಕಾಂಗ್ರೆಸ್ ಪಾರ್ಟಿಯಲ್ಲಿದ್ದೇನೆ, ನಾಯಕರು ಏನೇ ಅಭಿಪ್ರಾಯಗಳನ್ನು ಹೇಳಿದರೂ ತೀರ್ಮಾನವಾಗುವುದು ದೆಹಲಿಯಲ್ಲಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದರು.
ಮೇ 10ಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಡೆಡ್ ಲೈನ್ ನೀಡಲಾಗಿದೆ ಎಂಬ ವದಂತಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ,ಯಾರು ಹೇಳಿದರು ನಿಮಗೆ ಎಂದು ಕೇಳಿದರು. ಮೇ 15ಕ್ಕೆ ಡಿ ಕೆ ಶಿವಕುಮಾರ್ ಬರ್ತ್ ಡೇ ಮುನ್ನ ತೀರ್ಮಾನವಾಗಬೇಕೆಂದಾಗಿದೆಯಂತಲ್ಲವೇ ಎಂದು ಕೇಳಿದಾಗ, ಬರ್ತ್ ಡೇಗಳು ಬರುತ್ತವೆ, ಹೋಗುತ್ತವೆ. ಅವರ ಬರ್ತ್ ಡೇಗೂ ನಾಯಕತ್ವ ಬದಲಾವಣೆಗೆ ಸಂಬಂಧವಿಲ್ಲ, ಹೈಕಮಾಂಡ್ ಸಮಯ ಬಂದಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
Advertisement